Karnataka SSLC Social Science Model Question Paper 1 with Answers in Kannada

Students can Download Karnataka SSLC Social Science Model Question Paper 1 with Answers in Kannada, Karnataka SSLC Social Science Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Social Science Model Question Paper 1 with Answers in Kannada

Karnataka SSLC Social Science Model Question Paper 1 Kannada Medium - 1
Karnataka SSLC Social Science Model Question Paper 1 Kannada Medium - 2
Karnataka SSLC Social Science Model Question Paper 1 Kannada Medium - 3
Karnataka SSLC Social Science Model Question Paper 1 Kannada Medium - 4
Karnataka SSLC Social Science Model Question Paper 1 Kannada Medium - 5
Karnataka SSLC Social Science Model Question Paper 1 Kannada Medium - 6
Karnataka SSLC Social Science Model Question Paper 1 Kannada Medium - 7
Karnataka SSLC Social Science Model Question Paper 1 Kannada Medium - 8
Karnataka SSLC Social Science Model Question Paper 1 Kannada Medium - 9
Karnataka SSLC Social Science Model Question Paper 1 Kannada Medium - 10
Karnataka SSLC Social Science Model Question Paper 1 Kannada Medium - 11
Karnataka SSLC Social Science Model Question Paper 1 Kannada Medium - 30
Karnataka SSLC Social Science Model Question Paper 1 Kannada Medium - 12
Karnataka SSLC Social Science Model Question Paper 1 Kannada Medium - 13
Karnataka SSLC Social Science Model Question Paper 1 Kannada Medium - 14
Karnataka SSLC Social Science Model Question Paper 1 Kannada Medium - 15
Karnataka SSLC Social Science Model Question Paper 1 Kannada Medium - 16
Karnataka SSLC Social Science Model Question Paper 1 Kannada Medium - 17
Karnataka SSLC Social Science Model Question Paper 1 Kannada Medium - 18
Karnataka SSLC Social Science Model Question Paper 1 Kannada Medium - 19
Karnataka SSLC Social Science Model Question Paper 1 Kannada Medium - 20
Karnataka SSLC Social Science Model Question Paper 1 Kannada Medium - 21
Karnataka SSLC Social Science Model Question Paper 1 Kannada Medium - 22
Karnataka SSLC Social Science Model Question Paper 1 Kannada Medium - 23
Karnataka SSLC Social Science Model Question Paper 1 Kannada Medium - 24
Karnataka SSLC Social Science Model Question Paper 1 Kannada Medium - 25
Karnataka SSLC Social Science Model Question Paper 1 Kannada Medium - 26
Karnataka SSLC Social Science Model Question Paper 1 Kannada Medium - 27
Karnataka SSLC Social Science Model Question Paper 1 Kannada Medium - 28
Karnataka SSLC Social Science Model Question Paper 1 Kannada Medium - 29

Karnataka SSLC Kannada Model Question Paper 2 with Answers (2nd Language)

Students can Download Karnataka SSLC Kannada Model Question Paper 2 with Answers (2nd Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 2 with Answers (2nd Language)

Karnataka SSLC Kannada Model Question Paper 2 with Answers (2nd Language) - 1
Karnataka SSLC Kannada Model Question Paper 2 with Answers (2nd Language) - 2
Karnataka SSLC Kannada Model Question Paper 2 with Answers (2nd Language) - 3

Karnataka SSLC Kannada Model Question Paper 2 with Answers (2nd Language) - 4
Karnataka SSLC Kannada Model Question Paper 2 with Answers (2nd Language) - 5
Karnataka SSLC Kannada Model Question Paper 2 with Answers (2nd Language) - 6

Karnataka SSLC Kannada Model Question Paper 2 with Answers (2nd Language) - 7
Karnataka SSLC Kannada Model Question Paper 2 with Answers (2nd Language) - 8
Karnataka SSLC Kannada Model Question Paper 2 with Answers (2nd Language) - 9
Karnataka SSLC Kannada Model Question Paper 2 with Answers (2nd Language) - 10

Karnataka SSLC Kannada Model Question Paper 2 with Answers (2nd Language) - 11
Karnataka SSLC Kannada Model Question Paper 2 with Answers (2nd Language) - 12
Karnataka SSLC Kannada Model Question Paper 2 with Answers (2nd Language) - 13
Karnataka SSLC Kannada Model Question Paper 2 with Answers (2nd Language) - 14

Karnataka SSLC Kannada Model Question Paper 2 with Answers (2nd Language) - 15
Karnataka SSLC Kannada Model Question Paper 2 with Answers (2nd Language) - 16
Karnataka SSLC Kannada Model Question Paper 2 with Answers (2nd Language) - 17
Karnataka SSLC Kannada Model Question Paper 2 with Answers (2nd Language) - 18

Karnataka SSLC Kannada Model Question Paper 2 with Answers (2nd Language) - 19
Karnataka SSLC Kannada Model Question Paper 2 with Answers (2nd Language) - 20
Karnataka SSLC Kannada Model Question Paper 2 with Answers (2nd Language) - 21
Karnataka SSLC Kannada Model Question Paper 2 with Answers (2nd Language) - 22

Karnataka SSLC Kannada Model Question Paper 2 with Answers (2nd Language) - 23
Karnataka SSLC Kannada Model Question Paper 2 with Answers (2nd Language) - 24
Karnataka SSLC Kannada Model Question Paper 2 with Answers (2nd Language) - 25
Karnataka SSLC Kannada Model Question Paper 2 with Answers (2nd Language) - 26
Karnataka SSLC Kannada Model Question Paper 2 with Answers (2nd Language) - 27

Karnataka SSLC Kannada Model Question Paper 2 with Answers (2nd Language) - 28
Karnataka SSLC Kannada Model Question Paper 2 with Answers (2nd Language) - 29
Karnataka SSLC Kannada Model Question Paper 2 with Answers (2nd Language) - 30
Karnataka SSLC Kannada Model Question Paper 2 with Answers (2nd Language) - 31

Karnataka SSLC Kannada Model Question Paper 2 with Answers (2nd Language) - 32
Karnataka SSLC Kannada Model Question Paper 2 with Answers (2nd Language) - 33
Karnataka SSLC Kannada Model Question Paper 2 with Answers (2nd Language) - 34

Karnataka SSLC Kannada Model Question Paper 2 with Answers (2nd Language) - 35

Karnataka SSLC Kannada Previous Year Question Paper March 2018 (1st Language)

Students can Download Karnataka SSLC Kannada Previous Year Question Paper March 2018 (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Previous Year Question Paper March 2018 (1st Language)

ಸಮಯ: 3 ಗಂಟೆ
ಅಂಕಗಳು – 100

ವಿಭಾಗ – ಎ
(ಪಠ್ಯಗಳ ಅಧ್ಯಯನ-ಗದ್ಯ, ಪದ್ಯ, ಪೋಷಕ ಅಧ್ಯಯನ)

I. ಹಿಂದೊಂದು ವಾಕ್ಯದಲ್ಲಿ ಉತ್ತರ ಬರೆಯುವುದು: 9 × 1 = 9

ಪ್ರಶ್ನೆ 1.
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?

ಪ್ರಶ್ನೆ 2.
ಮತಂಗಾಶ್ರಮಕ್ಕೆ ಹೋಗಲು ರಾಮಲಕ್ಷ ಣರಿಗೆ ಸೂಚಿಸಿದವರು ಯಾರು ?

ಪ್ರಶ್ನೆ 3.
ವಚನಕಾರರಿಗೆ ಯಾವುದು ದೇವರಾಗಿತ್ತು ?

ಪ್ರಶ್ನೆ 4.
ಧರ್ಮಬುದ್ದಿಯು ಸೂರ್ಯೊದಯವಾದ ಕೂಡಲೆ ಏನು ಮಾಡಿದನು ?

ಪ್ರಶ್ನೆ 5.
ಯಶೋಭದ್ರೆಯು ರತ್ನಗಂಬಳಿಗಳನ್ನು ಯಾರಿಗೆ ಕೊಟ್ಟಳು ?

ಪ್ರಶ್ನೆ 6.
ಹಕ್ಕಿಯ ಗರಿಯಲ್ಲಿ ಯಾವ ಯಾವ ಬಣ್ಣಗಳಿವೆ ?

ಪ್ರಶ್ನೆ 7.
ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು ?

ಪ್ರಶ್ನೆ 8.
ಲವನು ಕುದುರೆಯನ್ನು ಯಾವುದರಿಂದ ಕಟ್ಟದನು ?

ಪ್ರಶ್ನೆ 9.
ಹಾಲುಗಲ್ಲದ ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ?

II.ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 10 × 2 = 20

ಪ್ರಶ್ನೆ 10.
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು ?

ಪ್ರಶ್ನೆ 11.
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವನ್ನು ತಿಳಿಸಿ.

ಪ್ರಶ್ನೆ 12.
ದುಷ್ಟಬುದ್ಧಿಯು ತನ್ನ ತಂದೆಯನ್ನು ಏಕಾಂತಕ್ಕೆ ಕರೆದು ಹೇಳಿದ ಮಾತುಗಳಾವುವು ?

ಪ್ರಶ್ನೆ 13.
ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾಧಿಯಿದೆ ಎಂದು ಭಾವಿಸಲು ಕಾರಣವೇನು ?

ಪ್ರಶ್ನೆ 14.
ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?

ಪ್ರಶ್ನೆ 15.
ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ತಿಳಿಸಿ.

ಪ್ರಶ್ನೆ 16.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು ?

ಪ್ರಶ್ನೆ 17.
ಭಗತ್‌ಸಿಂಗ್‌ನ ಸಹೋದರಿಗೆ ಆತನ ಉಪವಾಸದ ಕಾರಣಗಳು ಹೇಗೆ ತಿಳಿದು ಬಂದವು ?

ಪ್ರಶ್ನೆ 18.
ಮೃಗದ ಬಗೆಗೆ ಸುಂದರಿಯ ಮನಸ್ಸು ಏಕೆ ಕರಗುತ್ತಿತ್ತು ?

ಪ್ರಶ್ನೆ 19.
ಉತ್ತರಾಣಿ ಗಿಡ ಎಂಬ ಉತ್ತರ ಬರಲು ಹೇಳಿದ ಒಗಟು ಯಾವುದು ?

ಪ್ರಶ್ನೆ 20.
ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ.

ಪ್ರಶ್ನೆ 21.
ದೇವರೆ ಮರ ಹತ್ತುವಷ್ಟು ಅವಕಾಶ ಕರುಣಿಸು.

ಪ್ರಶ್ನೆ 22.
ಸಾರ್ವಭೌಮರಾ ನೆತ್ತಿಯ ಕುಕ್ಕಿ.

ಪ್ರಶ್ನೆ 23.
ಬೇರೆ ಬಣ್ಣವನೆ ಕಾಣೆ

III. ಕೆಳಗಿನ ಕವಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಪ್ರಶಸ್ತಿ / ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ: 2 × 3 = 6

ಪ್ರಶ್ನೆ 24.
ಪು. ತಿ ನರಸಿಂಹಾಚಾರ್:

ಪ್ರಶ್ನೆ 25.
ಪಂಪ:

ಪ್ರಶ್ನೆ 26.
ಈ ಕೆಳಗಿನಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ.
Karnataka Board SSLC Kannada Question Paper March 2018 1

ಪ್ರಶ್ನೆ 27.
ಪದ್ಯಭಾಗವನ್ನು ಓದಿ, ಅರ್ಥಮಾಡಿಕೊಂಡು ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. 1 × 4 =4
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ ಕೆಡುವುತ ಸೇತುವೆಯಾಗೋಣ.

IV. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ : 2 × 4 = 8

ಪ್ರಶ್ನೆ 28.
ಮೈಸೂರು ಸಂಸ್ಥಾನ ಮಾದರಿ ಮೈಸೂರು ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪಾತ್ರವೇನು ? – ವಿವರಿಸಿ.
ಅಥವಾ
ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ಪ್ರಶ್ನೆ 29.
ತನ್ನಜನ್ಮರಹಸ್ಯ ತಿಳಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ? :
ಅಥವಾ
ಶ್ರೀಕೃಷ್ಣನು ಕರ್ಣನಿಗೆ ಒಡ್ಡಿದ ಆಮಿಷಗಳನ್ನು ಕುರಿತು ಬರೆಯಿರಿ.

ಪ್ರಶ್ನೆ 30.
ಈ ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ವಿಶ್ವದ ಬಹುಭಾಷಾ ಪ್ರಪಂಚದಲ್ಲಿ ಸುಮಾರು ನಾಲ್ಕು ಸಾವಿರ ಭಾಷೆಗಳಿವೆ. ಭಾಷೆಗಳನ್ನು ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆ ಎಂದು ವಿಂಗಡಿಸಲಾಗಿದೆ. ವ್ಯಾವಹಾರಿಕ ಎಂದರೆ ಜೀವದ ಭಾಷೆ. ಇದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಉದಾಹರಣೆ ಕನ್ನಡ, ತುಳು, ಕೊಂಕಣಿ, ಉರ್ದು ಇತ್ಯಾದಿ. ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಬಳಸುವ ಭಾಷೆಯೇ ಗ್ರಾಂಥಿಕ ಭಾಷೆಗಳು ವ್ಯಾವಹಾರಿಕವಾಗಬೇಕಿಲ್ಲ ಹಾಗೆಯೇ ಎಲ್ಲಾ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕೆಂಬ ನಿಯಮವಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಗ್ರಾಂಥಿಕ ಭಾಷೆಯಲ್ಲ. ದೇವಭಾಷೆ ಎನಿಸಿರುವ ಸಂಸ್ಕೃತ ಗ್ರಾಂಥಿಕ ಭಾಷೆಯಾಗಿದೆ. ಆದರೆ ಯಾವ ಪ್ರದೇಶದಲ್ಲಿಯೂ ವ್ಯಾವಹಾರಿಕವಾಗಿಲ್ಲ. ನವಶಿಲಾಯುಗದ ಮಾನವ ತನ್ನ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ ಬದುಕು ಮೊದಲಾದ ಭಾವನೆಯನ್ನು ಹೊಂದಲು ಪ್ರಾರಂಭಿಸಿದಂದಿನಿಂದ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಓದು ಬರಹ ಬಾರದೆ ಇದ್ದರೂ ತಾನು ಕೆಲಸಕ್ಕೆ ಹೋದ ದಿನಗಳನ್ನು ದಿನನಿತ್ಯ ಗೋಡೆಯ ಮೇಲೆ ಒಂದೊಂದು ಗೆರೆ ಎಳೆದು ಗುರುತಿಸಿ ಕೊನೆಯಲ್ಲಿ ಲೆಕ್ಕಹಾಕಿ ಸಂಬಳ ಪಡೆಯುತ್ತಾನೆ. ಇದನ್ನು ಅಪಿಯ ಉಗಮ ಕಾಲ ಎನ್ನುವರು.

ಪ್ರಶ್ನೆಗಳು :
ಅ) ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಗಳಿಗಿರುವ ವ್ಯತ್ಯಾಸಗಳೇನು ?
ಆ) ಅಪಿಯ ಉಗಮ ಹೇಗಾಯಿತು ?

ವಿಭಾಗ – ಬಿ
(ಅನ್ವಯಿಕ ವ್ಯಾಕರಣ, ಅಲಂಕಾರ ಹಾಗೂ ಛಂದಸ್ಸು)

I. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ :

ಪ್ರಶ್ನೆ 31.
ಗುಣಸಂಧಿಗೆ ಉದಾಹರಣೆಯಾಗಿರುವ ಪದ :
ಎ) ಗಿರೀಶ
ಬ) ಮಹರ್ಷಿ
ಸಿ) ಮೈದೋರು
ಡಿ) ಷಣ್ಮುಖ

ಪ್ರಶ್ನೆ 32.
ಒಂದು ಪದವನ್ನೋ, ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಪದವನ್ನೋ, ವಾಕ್ಯವನ್ನೇ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಎ) ವಾಕ್ಯವೇಷ್ಟನ
ಬಿ) ಉದ್ಧರಣ
ಸಿ) ಆವರಣ
ಡಿ) ವಸೂಚಕ

ಪ್ರಶ್ನೆ 33.
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿರುವ ವಾಕ್ಯ ಇದು:
ಎ) ಸಂಯೋಜಿತ ವಾಕ್ಯ
ಬಿ) ಸಾಮಾನ್ಯವಾಕ್ಯ
ಸಿ) ಪ್ರಶ್ನಾರ್ಥಕ ವಾಕ್ಯ
ಡಿ) ಮಿಶ್ರವಾಕ್ಯ

ಪ್ರಶ್ನೆ 34.
ಚಂದ್ರನಂತೆ ಪದವು ವ್ಯಾಕರಣಾಂಶದ ಈ ಗುಂಪಿಗೆ ಸೇರಿದೆ. –
ಎ) ತದ್ಧಿತಾಂತಾವ್ಯಯ
ಬಿ) ಕೃದಂತಾವ್ಯಯ
ಸಿ) ತದ್ಧಿತಾಂತ ಭಾವನಾಮ
ಡಿ) ಕೃದಂತ ಭಾವನಾಮ

ಪ್ರಶ್ನೆ 35.
ರಾಹುಲ ಪದವು ನಾಮಪದದ ಈ ಗುಂಪಿಗೆ ಸೇರಿದೆ.
ಎ) ರೂಢನಾಮ
ಬಿ) ಅನ್ವರ್ಥನಾಮ
ಸಿ) ಅಂಕಿತನಾಮ
ಡಿ) ಭಾವನಾಮ

ಪ್ರಶ್ನೆ 36.
ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದ:
ಎ) ಮಾಡಿದ
ಬಿ) ಮಾಟ
ಸಿ) ಮಾಡಲು
ಡಿ) ಮಾಡುವ

ಪ್ರಶ್ನೆ 37.
ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ:
ಎ) ಸಂಪ್ರದಾನ
ಬಿ) ಸಂಬಂಧ
ಸಿ) ಅಪಾದಾನ
ಡಿ) ಅಧಿಕರಣ

ಪ್ರಶ್ನೆ 38.
ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆಯಾಗಿರುವ ಪದ :
ಎ) ನೀನೇ
ಬಿ) ಆದ್ದರಿಂದ
ಸಿ) ಚೆನ್ನಾಗಿ
ಡಿ) ಸಾಕು

ಪ್ರಶ್ನೆ 39.
ವ್ಯಾಪಾರಿ ಪದದ ತದ್ಭವ ರೂಪ : –
ಎ) ಬಿಕಾರಿ
ಬಿ) ಬೀಮಾರಿ
ಸಿ) ಬೇಹಾರಿ
ಡಿ) ಬಿಹಾರಿ

ಪ್ರಶ್ನೆ 40.
ಮಾಡಳು ಪದವು ಈ ಕ್ರಿಯಾರೂಪಕ್ಕೆ ಸೇರಿದೆ.
ಎ) ವಿದ್ಯರ್ಥಕ
ಬಿ) ಸಂಭಾವನಾರ್ಥಕ
ಸಿ) ಪ್ರಶ್ನಾರ್ಥಕ
ಡಿ) ನಿಷೇಧಾರ್ಥಕ

II. ಈ ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ :

ಪ್ರಶ್ನೆ 41.
ಇನಾಮು : ಅರಬ್ಧ :: ಸಲಾಮು ____________________

ಪ್ರಶ್ನೆ 42.
ಹೊಗೆದೋರು : ಕ್ರಿಯಾಸಮಾಸ : ಚಕ್ರಪಾಣಿ ____________________

ಪ್ರಶ್ನೆ 43.
ಕದಳ : ಬಾಳೆ :: ವಾಜಿ ________________

ಪ್ರಶ್ನೆ 44.
ಹಾಲ್ಲೇನು : ಜೋಡುನುಡಿ :: ಬಟ್ಟಬಯಲು :________________

ಪ್ರಶ್ನೆ 45.
ಪ್ರಸ್ತಾರ ಹಾಕಿ, ಗಣ ವಿಭಾಗಿಸಿ, ಛಂದಸ್ಸಿನ ಹೆಸರನ್ನು ಬರೆಯಿರಿ. 1 × 3 = 3
ಕಾದಿದ ರೆನಜ್ಜ ಪಾಂಡವ
ರಾದ‌ ಮೇಣೀ ದಿನೊಂದೆ ಅಥವಾ ಸಮರದೊ ಳಾಂಮೇ
ಒಡವೆ ಯನರ್ಥಿ ಗಿತ್ತೆನ ವನೀತ ಳಮಂಗು ರುಗಿತ್ತೆ ನೀಗಳೊಂ

ಪ್ರಶ್ನೆ 46.
ಈ ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರದು, ಸಮನ್ವಯಗೊಳಿಸಿ. 1 × 3 = 3
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ
ಅಥವಾ
ಸಿಡಿಲ ಸಿಡಿದ್ದಾಂಗಾ ಗುಂಡು ಸುರಿದಾವ

ವಿಭಾಗ – ಸಿ
(ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ)

ಪ್ರಶ್ನೆ 47.
ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ : 1 × 3 = 3

  • ಕೂಡಿ ಬಾಳಿದರೆ ಸ್ವರ್ಗ ಸುಖ
  • ಮಾಡಿದ್ದುಣೋ ಮಹಾರಾಯ
  • ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ.

ಪ್ರಶ್ನೆ 48.
ನಿಮ್ಮನ್ನು ವಿಜಯಪುರದ ವಿವೇಕಾನಂದ ಪ್ರೌಢಶಾಲೆಯ ‘ಹರ್ಷಿಣಿ’ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ ‘ಗಣರಾಜ್ಯೋತ್ಸವ ಆಚರಣೆ’ಯ ವರದಿಯನ್ನು ಪ್ರಕಟಿಸುವಂತೆ ಕೋರಿ ‘ಹೊಸ ದಿಗಂತ’ ದಿನಪತ್ರಿಕೆಯ ಸಂಪಾದಕರಿಗೊಂದು ಮನವಿ ಪತ್ರ ಬರೆಯಿರಿ. 1 × 5 = 5
ಅಥವಾ
ನಿಮ್ಮನ್ನು ಹಾಸನಾ ಪ್ರೌಢಶಾಲೆಯ ‘ಅಶೋಕ’ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ವಿವರವನ್ನು ತಿಳಿಸಿ, ಮೈಸೂರಿನಲ್ಲಿರುವ ‘ಜಯಲಕ್ಷಿ ‘ ಎಂಬ ಹೆಸರಿನ ತಾಯಿಯವರಿಗೊಂದು ಪತ್ರ ಬರೆಯಿರಿ.

ಪ್ರಶ್ನೆ 49.
ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧ ಬರೆಯಿರಿ. 1 × 5 = 5

  • ತ್ಯಾಜ್ಯವಸ್ತುಗಳ ನಿರ್ವಹಣೆ
  • ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲತಾಣಗಳ ಸದ್ಬಳಕೆ
  • ಕರ್ನಾಟಕದ ನದಿ ನೀರಿನ ಸಮಸ್ಯೆಗಳು

ಪ್ರಥಮ ಭಾಷೆ ಕನ್ನಡ

I
ಉತ್ತರ 1:
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದನು.

ಉತ್ತರ 2:
ಮತಂಗಾಶ್ರಮಕ್ಕೆ ಹೋಗಲು ರಾಮಲಕ್ಷ್ಮಣರಿಗೆ ಸೂಚಿಸಿದವರು ದನು.

ಉತ್ತರ 3:
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.

ಉತ್ತರ 4:
ಧರ್ಮಬುದ್ದಿಯು ಸೂರ್ಯೋದಯವಾದ ಕೂಡಲೆ ದೇವಗುರು ದ್ವಿಜರ ಪೂಜೆ ಮಾಡಿದನು.

ಉತ್ತರ 5:
ಯಶೋಭದ್ರೆಯು ರತ್ನಗಂಬಳಿಗಳನ್ನು ತನ್ನ ಸೊಸೆಯಂದಿರಿಗೆ ಕೊಟ್ಟಳು.

ಉತ್ತರ 6:
ಹಕ್ಕಿಯ ಗರಿಯಲ್ಲಿ ಬಿಳಿ ಮತ್ತು ಹೊಳೆಯುವ ಬಣ್ಣಗಳಿವೆ.

ಉತ್ತರ 7:
ಕುಂಪಣಿ ಸರ್ಕಾರ ನಿಶ್ಯಸ್ತ್ರೀಕರಣ ಆದೇಶ ಹೊರಡಿಸಿತು.

ಉತ್ತರ 8:
ಲವನು ಕುದುರೆಯನ್ನು ತನ್ನ ಉತ್ತರೀಯದಿಂದ ಕಟ್ಟಿದನು.

ಉತ್ತರ 9:
ಹಾಲುಗಲ್ಲದ ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.

II.
ಉತ್ತರ 10:
ಆ ಮಹಿಳೆ ಯಾವ ಅಪಾಯದಲ್ಲಿ ಸಿಲುಕಿದ್ದಾಳೆ ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ ? ತಾನೀಗ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಗಡಿ ಪ್ರದೇಶದಲ್ಲಿ ವಿಮಾನದಾಳಿಯಿಂದ ರಕ್ಷಿಸಲು ಬ್ಲಾಕ್ ಔಟ್ ನಿಯಮ ಪಾಲಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ? ಎಂಬ ಪ್ರಶ್ನೆಗಳು ರಾಹಿಲನ ಮನದಲ್ಲಿ ಮೂಡಿದವು.

ಉತ್ತರ 11:
ಡಾ. ಅಶೋಕ ಪೈ ಅವರು ಮನಸ್ಸಿನ ಬಗ್ಗೆ ನಡೆದ ಒಂದು ಸಂಶೋಧನಾ ಸತ್ಯವನ್ನು ಹೀಗೆ ಹೇಳಿದ್ದಾರೆ. ಕೆಲವರು ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾಗ, ಇನ್ನು ಕೆಲವರು ಇದರ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವು ಪಕ್ಕದ ಕೊಠಡಿಯಲ್ಲಿ ಮಾತನಾಡುತ್ತಿರುತ್ತಾರೆ. ಟೆಲಿವಿಷನ್‌ನಲ್ಲಿ ಬರುವ ಕೋಲೆಯ ದೃಶ್ಯ ನೋಡುತ್ತಿರುವವರ ದುಃಖದ ಭಾವನೆ ಪಕ್ಕದ ಕೊಠಡಿಯಲ್ಲಿರುವವರ ಮನಸಿನಲ್ಲೂ ದುಗುಡ ಉಂಟುಮಾಡುತ್ತದೆ. ನೃತ್ಯದ ದೃಶ್ಯ ಖುಷಿಯ ಭಾವನೆ ಉಂಟುಮಾಡುತ್ತದೆ. ಯಾವ ಜೀವಿಯೂ ತನ್ನಷ್ಟಕ್ಕೆ ತಾನಿರುವುದಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಎಲ್ಲಾ ಜೀವಿಗಳಿಗೂ ಆಗುತ್ತದೆ ಎಂದಿದ್ದಾರೆ.

ಉತ್ತರ 12:
ದುಷಬುದಿಯು ಮನೆಗೆ ಬಂದವನೆ ತನ್ನ ತಂದೆಯ ಕೈಹಿಡಿದು ಏಕಾಂತಕ್ಕೆ ಕರೆದುಕೊಂಡು ಹೋಗಿ ನಡೆದ ವೃತ್ತಾಂತವನ್ನೆಲ್ಲ ತಿಳಿಸುತ್ತಾನೆ. “ನಿಮ್ಮ ಒಂದು ವಚನದಿಂದ ನಮ್ಮ ಪರಿವಾರವೆಲ್ಲ ಹಲವು ಕಾಲ ಹಸಿಯದೆ ಸುಖವಾಗಿ ಬಾಳಬಹುದು. ನೀವು ಆ ಮರದ ಪೊಟರೆಯಲ್ಲಿ ಅಡಗಿ ಕುಳಿತು ಧರ್ಮಬುದ್ಧಿಯೇ ಹೊನ್ನನ್ನೆಲ್ಲವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ನುಡಿಯಬೇಕು” ಎಂದು ತನ್ನ ತಂದೆಗೆ ಹೇಳುತ್ತಾನೆ.

ಉತ್ತರ 13:
ವೃಷಭಾಂಕ ಮತ್ತು ಸುಕುಮಾರಸ್ವಾಮಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಬಂಧುಗಳು, ಪರಿವಾರದವರು ಶುಭಕರವಾದ ಬಿಳಿ ಸಾಸಿವೆಯ ಅಕ್ಷತೆಯನ್ನು ಹಾಕಿದಾಗ ಸುಕುಮಾರ ಸ್ವಾಮಿಗೆ ಒತ್ತಿದಂತಾಗಿ ಸೊಂಟವನ್ನು ಅಲುಗಾಡಿಸುತ್ತಾನೆ. ದೀಪವನ್ನು ನೋಡಿದಾಗ ಕಣ್ಣೀರು ಸುರಿಸುತ್ತಾನೆ. ಊಟ ಮಾಡುವಾಗ ಅರ್ಧ ಆಹಾರವನ್ನು ನುಂಗಿ, ಅರ್ಧ ಆಹಾರವನ್ನು ಉಗುಳುವುದನ್ನು ಕಂಡು ಆಹಾರದ ಮೇಲಿನ ಅರುಚಿಯಿಂದ ಹೀಗೆ ಮಾಡುತ್ತಿದ್ದಾನೆ. ಈತನಿಗೆ ಏನೋ ವ್ಯಾಧಿಯಿರಬಹುದೆಂದು ಅರಸನು ಭಾವಿಸುತ್ತಾನೆ.

ಉತ್ತರ 14:
ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಆಡಳಿತದ ಸೂತ್ರ ಹಿಡಿದು ನಿಶ್ಯಸ್ತ್ರೀಕರಣ ಕಾಯಿದೆ ಹೇರಿದರು. ಇದರಂತೆ ಸರಕಾರದ ಅನುಮತಿಯಿಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಇದ್ದ ಆಯುಧಗಳನ್ನು ಹಿಂದಿರುಗಿಸಬೇಕಾಯಿತು. ಹಲಗಲಿಯ ಬೇಡರು ವಿರೋಧಿಸುತ್ತಾರೆ. ಬೇಡರಾಗಿರುವುದರಿಂದ ಆಯುಧವಿಲ್ಲದೆ ಬದುಕುವುದು ಅಸಾಧ್ಯ. ಅಲ್ಲದೆ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಾರಕೂನನ ಕಪಾಳಕ್ಕೆ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಾರಕೂನನ ಕಪಾಳಕ್ಕೆ ಹೊಡೆಯುತ್ತಾರೆ. ಸುದ್ದಿ ತಿಳಿದ ಸಾಹೇಬ ಮತ್ತಷ್ಟು ಸೈನ್ಯವನ್ನು ಕಳಿಸುತ್ತಾನೆ. ರಾಮ ಬಾಲ, ಜಡಗ, ಹನುಮ ಮೊದಲಾದ ವೀರರು ತಮ್ಮಲ್ಲಿದ್ದ ಆಯುಧಗಳನ್ನು ಕೊಡಲೊಪ್ಪದೆ ದಂಗೆ ಎದ್ದರು.

ಉತ್ತರ 15:
ರಘುವಂಶದ ರಾಜನಾದ ಶ್ರೀರಾಮನ ಯಾಗದ ಕುದುರೆ ಎಂದು ತಿಳಿದು ಪರಾಕ್ರಮಿಗಳಾದ ರಾಜರು ಕುದುರೆಗೆ ನಮಸ್ಕರಿಸಿ ಕಳಿಸುತ್ತಿದ್ದರು. ಹೀಗೆ ಯಾಗದ ಕುದುರೆ ಭೂಮಿಯಲ್ಲಿ ಸಂಚರಿಸುತ್ತ ವಾಲ್ಮೀಕಿ ಮುನಿಯ ಆಶ್ರಮದ ಕಡೆಗೆ ಬರುತ್ತದೆ. ಮುನಿಯ ಆಶ್ರಮದ ವಿನಿಯೋಗಕ್ಕಾಗಿ ಇದ್ದ ಉದ್ಯಾನವನದಲ್ಲಿ ಬೆಳೆದಿದ್ದ ಹಸಿರು ಹುಲ್ಲನ್ನು ನೋಡಿ, ತಿನ್ನಲು ಬಯಸಿ ಯಜ್ಞಾಶ್ವ ವಾಲ್ಮೀಕಿಯ ಆಶ್ರಮದ ವನವನ್ನು ಪ್ರವೇಶಿಸುತ್ತದೆ.

ಉತ್ತರ 16:
ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ವಿಕಾಸವಾಗುತ್ತಿತ್ತು. ಇಂದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ. ಶೂದ್ರವರ್ಗ ತನ್ನ ಊಳಿಗ ಸ್ವಭಾವವನ್ನು ಬಿಟ್ಟು ಹೊರಬರಬೇಕೆಂದು ವಿವೇಕಾನಂದರು ಕರೆ ನೀಡುತ್ತಾರೆ. ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆ ಎಂದು ಭಾವಿಸುತ್ತಾರೆ.

ಉತ್ತರ 17:
ಹನ್ನೆರಡು ವರ್ಷದ ಬಾಲಕ ಶಾಲೆಗೆ ಹೋಗದೆ ಅಮೃತಸರದ ಜಲಿಯನ್ ವಾಲಾಬಾಗ್‌ಗೆ ಹೋಗಿ ಅಂತರ್ಮುಖಿಯಾಗಿ ನಿಂತು, ನಂತರ ಅಲ್ಲಿದ್ದ ಮಣ್ಣನ್ನು ಹಣೆಗಿಟ್ಟುಕೊಂಡು, ಇನ್ನಷ್ಟನ್ನು ಡಬ್ಬಿಯಲ್ಲಿ ಶೇಖರಿಸಿಕೊಂಡು ರಾತ್ರಿ ಮನೆಗೆ ಹಿಂದಿರುಗಿದಾಗ, ಎಂದಿನಂತೆ ಸಹೋದರಿ ಊಟಕ್ಕೆ ಎಬ್ಬಿಸುತ್ತಾಳೆ. ಪ್ರಿಯವಾದ ಮಾವಿನ ಹಣ್ಣನ್ನು ನೀಡಿದರೂ ಒಲ್ಲೆ ಎನ್ನುತ್ತಾನೆ. ಕಾರಣ ಕೇಳಿದಾಗ ಮನೆಯ ಹಿಂಬಾಗಕ್ಕೆ ಕರೆದೊಯ್ದು ರಕ್ತಸಿಕ್ತವಾದ ಮಣ್ಣನ್ನು ತೋರಿಸುತ್ತಾನೆ. ಅದು ಎಲ್ಲಿಯದೆಂದು ತಿಳಿದಾಗ ಭಗತ್‌ಸಿಂಗ್‌ನ ಉಪವಾಸಕ್ಕೆ ಕಾರಣ ತಿಳಿಯುತ್ತದೆ.

ಉತ್ತರ 18:
ಮೃಗದ ಒರಟು ಮಾತು, ತಿಕ್ಕಲು ನಡವಳಿಕೆ ಮನಸಿನಲ್ಲಿ ನಗು ತರುತ್ತಿದ್ದವು. ಎಂದೂ ತನ್ನ ವಚನ ಮೀರಿರಲಿಲ್ಲ. ಮನ ನೋಯಿಸಿರಲಿಲ್ಲ. ತನ್ನನ್ನು ನೆಮ್ಮದಿಯಾಗಿಡುವುದೇ ಅದರ ಸುಖವಾಗಿತ್ತು. ಮುಖ, ಚಲನ-ವಲನ ನೆನಪಾಗುತ್ತಿತ್ತು. ಅರಮನೆಯ ಸುಖಕ್ಕಿಂತ ಮೃಗದ ವ್ಯಕ್ತಿತ್ವ ಆಕೆಯ ಮನಸ್ಸು – ತುಂಬಿತ್ತು. ಆತನ ಕಾಳಜಿಯನ್ನು ನೆನೆದು ಮೃಗದ ಬಗೆಗೆ ಸುಂದರಿಯ ಮನಸ್ಸು ಕರಗುತ್ತಿತ್ತು.

ಉತ್ತರ 19:
ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು ಎಲೆಬಾಲೆ ಬಾರೆ ಇದರರ್ಥ ಒಡೆದ್ದೇಳೆ ಸಂದರ್ಭವನ್ನು – ಸ್ವಾರಸ್ಯದೊಂದಿಗೆ ವಿವರಿಸಿ.

III.
ಉತ್ತರ 20:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ವಿ. ಕೃ. ಗೋಕಾಕರು ಬರೆದ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆಯ್ದ ಲಂಡನ್ ನಗರ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಲಂಡನ್ ನಗರದ ಪ್ರವಾಸದ ಅನುಭವಗಳನ್ನು ಲೇಖಕರು ದಾಖಲಿಸುತ್ತ ತಮ್ಮ ಅನುಭವಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬೇಕನ್ ಹೇಳಿದ ಮಾತನ್ನು ಸ್ಮರಿಸುತ್ತಾರೆ. ಕಡಿಮೆ ದಿನಗಳಲ್ಲಿ ಮನಸ್ಸು ವಿಕಾಸಗೊಂಡಿದೆ, ದೃಷ್ಟಿ ವಿಶಾಲವಾಗಿದೆ, ಸಂಸ್ಕೃತಿ ಒರೆಗಲ್ಲಿನ ಮೇಲೆ ನಿಂತಿದೆ ಎಂದು ನೆನಸುತ್ತ ಬೇಕನ್ ಹೇಳಿದ ಮಾತನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ : ದೇಶ ಸುತ್ತು ಕೋಶ ಓದು ಎಂಬ ಗಾದೆಯನ್ನು ಇದು ಅರ್ಥೈಸುತ್ತದೆ. ದೇಶ-ವಿದೇಶಗಳ ಪ್ರವಾಸದ ಅನುಭವವು ಜ್ಞಾನಾಭಿವೃದ್ಧಿಗೆ ಸಹಕಾರಿ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.

ಉತ್ತರ 21:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಎ.ಎನ್. ಮೂರ್ತಿರಾವ್ ಅವರು ಬರೆದಿರುವ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆರಿಸಿರುವ ವ್ಯಾಘ್ರಗೀತೆ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಹುಲಿಯಿಂದ ತಪ್ಪಿಸಿಕೊಳ್ಳಲು ಕುಲಾಲ ಚಕ್ರದಂತೆ ತಿರುಗಿ ತಿರುಗಿ ಶಾನುಭೋಗರಿಗೆ ಆಯಾಸವಾಗಿತ್ತು. ಮಡಿಯಬೇಕಾದರೆ ಮಾಡಿಯೇ ಮಡಿಯಬೇಕೆಂದು ಕೈಯಲ್ಲಿದ್ದ ಬ್ರಹ್ಮಾಸ್ತವಾದ ಖಿರ್ದಿ ಪುಸ್ತಕವನ್ನು ಹುಲಿಯೆಡೆಗೆ ಎಸೆದು ಅದರ ಗಮನ ಬೇರೆಡೆಗೆ ಸೆಳೆದು ಮರವೇರಿ ಬಿಡಬಹುದೆಂದು ತಿಳಿದು ಖಿರ್ದಿ ಪುಸ್ತಕವನ್ನು ಹುಲಿಯೆಡೆಗೆ ಎಸೆದು ಮೇಲಿನಂತೆ ಹೇಳುತ್ತ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸುವ ಸಂದರ್ಭದಲ್ಲಿ ಶಾನುಭೋಗರು ಮೇಲಿನಂತೆ ದೇವರಲ್ಲಿ ಪ್ರಾರ್ಥಿಸಿದರು.

ಸ್ವಾರಸ್ಯ : ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ, ಅಪಾಯಬಂದಾಗ ಉಪಾಯ ಹುಡುಕುವ ಗುಣವನ್ನು ಕಾಣಬಹುದು.

ಉತ್ತರ 22:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಕವಿ ದ. ರಾ. ಬೇಂದ್ರೆಯವರು ಬರೆದಿರುವ ಗರಿ ಕವನಸಂಕಲನದಿಂದ ಆರಿಸಿರುವ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಕಾಲದ ಸುಳಿಯಲ್ಲಿ ಎಲ್ಲರೂ ಸಮಾನರು. ನಿಸರ್ಗದತ್ತವಾದ ಕಾಲಚಕ್ರದಲ್ಲಿ ಎಂತಹ ಪ್ರಭಾವಶಾಲಿಯಾದರೂ ತಲೆಬಾಗಲೇಬೇಕು. ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತ ಹೋಗುತ್ತದೆ. ಬ್ರಿಟಿಷರ ಸಾಮಾಜ್ಯಶಾಹಿ ಆಡಳಿತ ಅನೇಕ ಕೋಟೆ ಕೊತ್ತಲಗಳನ್ನು ತೇಲಿಸಿ, ಮುಳುಗಿಸುವಂತೆ ಮಾಡಿತು. ಎಂತಹ ಸಾರ್ವಭೌಮರನ್ನು ಸಹ ಕಾಲ ಬಿಡಲಿಲ್ಲ ಎಂಬುದನ್ನು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಕವಿ ಹೇಳಿದ್ದಾರೆ.

ಸ್ವಾರಸ್ಯ : ಚಲನಶೀಲವಾದ ಕಾಲಕ್ಕೆ ಎಲ್ಲರೂ ತಲೆಬಾಗಲೇಬೇಕು. ಕಾಲದ ಸುಳಿಯಲ್ಲಿ ಸಿಲುಕದೆ ಇರುವ ವ್ಯಕ್ತಿ ಯಾರೊಬ್ಬರೂ ಇಲ್ಲ ಎಂಬುದನ್ನು ಧ್ವನಿಸುತ್ತದೆ.

ಉತ್ತರ 23:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಕವನ ಸಂಕಲನದಿಂದ ಆರಿಸಿರುವ ಹಸುರು ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಆಶ್ವಯುಜ ಮಾಸದ ನವರಾತ್ರಿಯ ಸೌಂದರ್ಯವನ್ನು ನೋಡಿ, ಎಲ್ಲಿ ನೋಡಿದರಲ್ಲಿ ಹಸುರು ತುಂಬಿದೆ. ಇಡೀ ಭೂಮಿಗೆ ಹಚ್ಚಹಸುರು ಬಣ್ಣದ ಮಕಮಲ್ಲಿನ ಜಮಖಾನೆಯನ್ನು ಹಾಸಿ ಮುಚ್ಚಿದಂತೆ ತೋರುತ್ತಿದೆ. ಹಸಿರು ಬಣ್ಣವೊಂದನ್ನು ಬಿಟ್ಟು ಬೇರೆ ಯಾವ ಬಣ್ಣವೂ ಕಾಣುತ್ತಿಲ್ಲ ಎಂಬುದನ್ನು ಕವಿ ಕುವೆಂಪು ಈ ರೀತಿ ವ್ಯಕ್ತಪಡಿಸಿದ್ದಾರೆ.

ಸ್ವಾರಸ್ಯ : ಮಲೆನಾಡಿನ ಪ್ರಕೃತಿ ಸೌಂದರ್ಯ ಹಾಗೂ ಪ್ರಕೃತಿಯ ಹಸುರಿನಲ್ಲಿ ಕವಿ ಮನ ತಲ್ಲೀನರಾಗಿರುವುದು ಸ್ವಾರಸ್ಯಕರವಾಗಿ ಮೂಡಿ ಬಂದಿದೆ.

IV.
ಉತ್ತರ 24:
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರಿನಾರಾಯಣಯ್ಯಂಗಾರ ಅಯ್ಯಂಗಾರ್ ನರಸಿಂಹಾಚಾರ್ ರವರು 1905ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇವರು ಅಹಿ, ಗೋಕುಲನಿರ್ಗಮನ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀ ಹರಿಚರಿತೆ, ರಥಸಪ್ತಮಿ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಚಿಕ್ಕಮಗಳೂರಿನಲ್ಲಿ 1981ರಲ್ಲಿ ನಡೆದ 53ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಉತ್ತರ 25:
ಆದಿ ಕವಿ ಎಂದೇ ಹೆಸರಾದ ಪಂಪ ಕ್ರಿ.ಶ. 941ರಲ್ಲಿ ವೆಂಗಿ ಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದರು. ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವಿನ ಸ್ಥಳವಾದ ವೆಂಗಿಪಳು ನಿಸರ್ಗ ಸೌಂದರ್ಯದ ತಾಣ. ಚಾಲುಕ್ಯರ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಈತ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ವಿಕ್ರಮಾರ್ಜುನ ವಿಜಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ. – ವೇದವ್ಯಾಸರ ಮಹಾಭಾರತವನ್ನು ಆಧರಿಸಿ ಬರೆದ ಈ ಕೃತಿಯಲ್ಲಿ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿದ್ದಾನೆ. ಇದೊಂದು ಲೌಕಿಕ ಕಾವ್ಯವೆಂದು ಘೋಷಿಸಿದ್ದಾನೆ. ಕವಿಯೂ, ಕಲಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿ ಒಬ್ಬ. ಸರಸ್ವತೀಮಣಿಹಾರ, ಸಂಸಾರ ಸಾರೋದಯ , ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದ ಪ್ರಸಿದ್ಧ ಕವಿ ಎಂದರೆ ಪಂಪ.

V
ಉತ್ತರ 26:
Karnataka Board SSLC Kannada Question Paper March 2018 2

ಉತ್ತರ 27:
ಈ ಪದ್ಯಸಾಲುಗಳನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ಎದೆತುಂಬಿಹಾಡುವೆನು ಕವನ ಸಂಕಲನದಿಂದ ಆರಿಸಿರುವ ಸಂಕಲ್ಪಗೀತೆ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಕವನದಲ್ಲಿ ಕವಿ ದೃಢಸಂಕಲ್ಪದಿಂದ ಹೇಗೆ ಯಶಸ್ಸುಗಳಿಸಬಹುದು ಎಂಬುದನ್ನು ಹೇಳಿದ್ದಾರೆ. ಜೀವನದಲ್ಲಿ ಧನಾತ್ಮಕ ಭಾವನೆಯನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದರೂ ದೃಢಸಂಕಲ್ಪ, ಆತ್ಮವಿಶ್ವಾಸದಿಂದ ಕ್ರಿಯಾಶೀಲರಾದಾಗ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಮನುಷ್ಯ ಬೇರೆ ಬೇರೆ ಜಾತಿ, ಮತಗಳಲ್ಲಿ ಮುಳುಗಿ ಹೋಗಿದ್ದಾನೆ. ಅವರಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯ ಭರವಸೆಯನ್ನು ಬಿತ್ತಬೇಕು. ಮನುಷ್ಯ ಮನುಷ್ಯರ ನಡುವೆ ಕಂದಕವನ್ನು ಸೃಷ್ಟಿಸಿರುವ ಜಾತಿ ಎಂಬ ಗೋಡೆಯನ್ನು ಕೆಡವಿ ಎಲ್ಲರನ್ನೂ ಒಗ್ಗೂಡಿಸುವ ಸೇತುವೆಯನ್ನು ನಿರ್ಮಿಸಬೇಕು. ಭೇದಭಾವವನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲವೃದ್ಧಿಸುತ್ತದೆ. ‘ವಸುದೈವ ಕುಟುಂಬಕಂ’ ಎಂಬಂತೆ ಇಡೀ ವಿಶ್ವವೇ ಕುಟುಂಬವಾಗಬೇಕು. ಆಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬಂತೆ ಯಶಸ್ಸನ್ನು ಸಾಧಿಸಬಹುದು. ಪಂಪ ಮಹಾಕವಿ ಹೇಳಿದಂತೆ ಮಾನವಕುಲ ತಾನೊಂದೆ ವಲಂ ಮನುಷ್ಯಕುಲವೊಂದೇ ಶ್ರೇಷ್ಟವಾದುದು. ಆದ್ದರಿಂದ ನಮ್ಮಲ್ಲಿರುವ ಭೇದ-ಭಾವ ಎಂಬ ಸಂಕುಚಿತ ಮನೋಭಾವವನ್ನು ದೂರಮಾಡಿ ಎಲ್ಲರೂ ಐಕ್ಯತೆಯಿಂದ ಬಾಳಬೇಕೆಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕೆಂಬುದೇ ಪ್ರಸ್ತುತ ಪದ್ಯಭಾಗದ ಮೌಲ್ಯವಾಗಿದೆ.

VI.
ಉತ್ತರ 28:
ನಾಲ್ವಡಿ ಕೃಷ್ಣರಾಜ ಒಡೆಯರು 1902 ಆಗಸ್ಟ್ 8 ರಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ದಿವಾನರಾಗಿದ್ದ ಸರ್.ಕೆ.ಶೇಷಾದ್ರಿಯವರ ಸಹಕಾರದಿಂದ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ದರಾದರು.ಅರಸುಮನೆತನದಿಂದ ಬಂದವರಾದರೂ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವುದರ ಪರವಾಗಿದ್ದರು.ಪ್ರಜಾಪ್ರತಿನಿಧಿಸಭೆ ಹೊಸರೂಪ ಪಡೆಯಿತು. 1923 ರಲ್ಲಿ ಕಾನೂನೊಂದನ್ನು ಜಾರಿಗೆ ತಂದು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆ ಯನ್ನಾಗಿಸಿದರು.ವರ್ಷಕ್ಕೆ ಎರಡು ಬಾರಿ ಸಮಾವೇಶಗೊಂಡುಕಲಾಪ ನಡೆಸಿ ವಾರ್ಷಿಕ ಆಯವ್ಯಯ, ಪರಿಶೀಲನೆ, ಪ್ರಶೋತ್ತರ ಠರಾವು ಮಂಡಿಸಲಾಗುತ್ತಿತ್ತು. ಹೆಚ್ಚಿನ ಸದಸ್ಯರು ಜನರಿಂದಲೇ ಆಯ್ಕೆಯಾಗುತ್ತಿದ್ದರು. 1907 ರಲ್ಲಿ ನ್ಯಾಯ’ ವಿಧಾಯಕ ಸಭೆ ಸ್ಥಾಪಿಸಿದರು. ಇದು ಮೇಲ್ಪನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.ಬೆಂಗಳೂರಿನಲ್ಲಿ ಎರಡು ಬಾರಿ ಸಮಾವೇಶಗೊಂಡು ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲವನ್ನು ವಿಮರ್ಶಿಸುವ ಕಾನೂನನ್ನು ಜಾರಿಗೆ ತರುವ ಅಧಿಕಾರ ಇದ್ದಿತು. ಗ್ರಾಮ ನಿರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕೇತಗಳಾದವು. ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ವಾಣಿವಿಲಾಸ ಸಾಗರ, ಕೃಷ್ಣಸಾಗರ ಜಲಾಶಯಗಳನ್ನು ನಿರ್ಮಿಸಿದರು. ಉಚಿತ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಜಾರಿಗೆ ತಂದರು. ಮೈಸೂರು ವಿಶ್ವವಿದ್ಯಾಲಯ, ಉಚಿತ ಆಸ್ಪತ್ರೆ ಮೈಸೂರು ಬ್ಯಾಂಕ್ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದರು. ಭರತಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮಾಡಿ ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರು ರಾಜ್ಯವನ್ನಾಗಿ ರೂಪಿಸಿ ಸಾಮಾಜಿಕ ಕಾನೂನುಗಳ ಹರಿಕಾರ ಎಂಬ ಕೀರ್ತಿಗೆ ಪಾತ್ರರಾದರು.
ಅಥವಾ
ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರ ಎಂದು ವಿಶ್ವೇಶ್ವರಯ್ಯನವರು ನಂಬಿದ್ದರು. ಶಿಕ್ಷಣವೇ ಸಂಜೀವಿನಿ ಎಂಬುದನ್ನು ಅರಿತು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. 1913 ರಲ್ಲಿ ಪ್ರಾಥಮಿಕ ಶಿಕ್ಷಣನಿಬಂಧನೆಯನ್ನು ಜಾರಿಗೆ ತಂದರು.ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣದಲ್ಲಿದ್ದ ಪ್ರೌಢಶಿಕ್ಷಣ ಶಾಲೆಗಳನ್ನು ಬದಲಿಸಿ, ಮೈಸೂರು ಸಂಸ್ಥಾನವೇ ಪ್ರತ್ಯೇಕವಾಗಿ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಇವರ ಕಾಲದಲ್ಲಿಯೇ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಾಯಿತು. ಶಿಕ್ಷಾಣಕ್ಕಾಗಿ ಶಿಕ್ಷಣವಿರಬೇಕು.ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ಎಂಬುದನ್ನು ಅರಿತಿದ್ದ ಇವರು ತಾಂತ್ರಿಕ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಸ್ಥಾಪಿಸಿದರು. ಏಕೀಕೃತ ಕರ್ನಾಟಕದ ರಚನೆ ಹಾಗೂ ಕನ್ನಡ ಭಾಷೆ ಸಾಹಿತ್ಯಗಳ ಮೇಲೆ ಜನರಿಗಿದ್ದ ಒಲವನ್ನು ಮನಗಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ವಿಶ್ವೇಶ್ವರಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಕೈಗನ್ನಡಿಯಾಗಿದೆ.

ಉತ್ತರ 29:
ದುರ್ಯೋಧನ ಪಾಂಡವರನ್ನು ದೂತದಲ್ಲಿ ಸೋಲಿಸುತ್ತಾನೆ. ಪಣದಂತೆ 12 ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದಪಾಂಡವರು ತಮ್ಮ ಪಾಲಿನ ರಾಜ್ಯವನ್ನು ಕೇಳಿದಾಗ ದುರ್ಯೋಧನ ಕೊಡಲು ನಿರಾಕರಿಸುತ್ತಾನೆ. ಸಂಧಾನದ ಮೂಲಕ ರಾಜ್ಯವನ್ನು ಮರಳಿ ಪಡೆಯಲು ಧರ್ಮರಾಯ ಕೃಷ್ಣನನ್ನು ಕಳುಹಿಸುತ್ತಾನೆ. ಸಂಧಿ ಮುರಿದು ಬಿದ್ದು ಯುದ್ದವೇ ಸಿದ್ದ ಎಂದು ತೀರ್ಮಾನವಾದಾಗ, ಕೌರವರ ಸೇನೆಯಲ್ಲಿದ್ದ ಕರ್ಣನೇ ಪಾಂಡವರಿಗೆ ಪ್ರಬಲ ಎದುರಾಳಿ ಆತನಿಂದ ಪಾಂಡವರನ್ನು ರಕ್ಷಿಸಬೇಕೆಂದು ಬಗೆದು ಕರ್ಣನಿಗೆ ಆತನ ಜನ್ಮರಹಸ್ಯವನ್ನು ತಿಳಿಸುತ್ತಾನೆ. ಪಾಂಡವರ ಹಿರಿಯ ನೀನೇನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ ಎಂಬ ಆಮಿಷ ಒಡ್ಡುತ್ತಾನೆ. ತನ್ನ ಜನ್ಮರಹಸ್ಯ ತಿಳಿದು ಕರ್ಣನು ಕುತ್ತಿಗೆಯ ನರಗಳು ಬಿಗಿದು, ಕಣ್ಣೀರು ಸುರಿಸುತ್ತಾನೆ. ಕೌರವನಿಗೆ ಕೇಡಾಗುತ್ತದೆ. ಕೃಷ್ಣನ ಹಗೆ ಹೊಗೆದೋರದೆ ಸುಡದೆ ಬಿಡುವುದಿಲ್ಲ ಎಂದು ಚಿಂತಿತನಾಗುತ್ತಾನೆ.ಕೆಲಕಾಲ ಸುಮ್ಮನಿದ್ದ ಕರ್ಣನನ್ನು ಕುರಿತು ಕೃಷ್ಣ ಹೀಗೆ ಹೇಳುತ್ತಾನೆ. ಪಾಂಡವರಿಂದ ಸೇವೆಮಾಡಿಸಿಕೊಳ್ಳಲು ಮನಸ್ಸಿಲ್ಲವೆ ? ನಾನು ನಿನಗೆ ಕೇಡು ಬಗೆಯುತ್ತಿಲ್ಲ. ಎಂದಾಗ ಕರ್ಣನು ಕೃಷ್ಣ ಈ ಭೂಮಿಗೆ ರಾಜ್ಯಕ್ಕೆ ಮನಸೋಲುವವನಲ್ಲ, ಕೌರವರಿಂದ ಪಾಂಡವರಿಂದ ಸೇವೆ ಮಾಡಿಸಿಕೊಳ್ಳಲು ಇಷ್ಟವಿಲ್ಲ. ನನ್ನನ್ನು ಕಾಪಾಡಿದ ಒಡೆಯನಿಗೆ ಶತ್ರುಗಳ ತಲೆಗಳನ್ನು ಕಡಿದು ಒಪ್ಪಿಸುವ ಅವಸರದಲ್ಲಿದ್ದೆ. ಅದಕ್ಕೂ ಮೊದಲೇ ಕೌರವನನ್ನು ಕೊಂದುಬಿಟ್ಟೆ. ಯಾರು ಏನು ಹೇಳಿದರೂ ಕೌರವನೇ ನನಗೆ ಎಲ್ಲ. ನಾಳೆ ನಡೆಯುವ ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಋಣ ತೀರುವಂತೆ ಹೋರಾಡುತ್ತೇನೆ. ಅವನಿಗಾಗಿ ಶರೀರವನ್ನು ಅರ್ಪಿಸುತ್ತೇನೆ. ನಿನ್ನವರಾದ ಪಾಂಡವರನ್ನು ನೋಯಿಸುವುದಿಲ್ಲ ಎನ್ನುತ್ತಾನೆ. ಸ್ವಾಮಿನಿಷ್ಠೆಗೆ ಬದ್ದನಾದ ಕರ್ಣ ಪ್ರಲೋಭನೆಗೆ ಬಲಿಯಾಗದೆ ಅಸಹಾಯಕನಾಗಿ, ಸಂಕಟದಿಂದ ಬಳಲುತ್ತಾನೆ. ಕರ್ಣನ ಹಿರಿಮೆ ಗರಿಮೆ ವ್ಯಕ್ತವಾಗಿದೆ.
ಅಥವಾ
ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅತ್ಯಗತ್ಯ. ಛಲ, ಮತ್ಸರ ಪ್ರಧಾನವಾದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಶತ್ರುವಿನೊಡನೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲುವು ಸಾಧ್ಯ ಎಂಬುದು ರಾಜತಂತ್ರ ಕೌರವರೊಂದಿಗೆ ಸಂಧಿ ಮುರಿದು ಬಿದ್ದು ಯುದ್ಧವೇ ಸಿದ್ಧ ಎಂದು ತೀರ್ಮಾನವಾದಾಗ ಕೃಷ್ಣನು ಕರ್ಣನನ್ನು ಕರೆದು ಮೈದುನತನದ ಸರಸವನ್ನು ಎಸಗಿ ತನ್ನ ರಥದಲ್ಲಿ ತೊಡೆಗೆ ತೊಡೆತಾಗುವಂತೆ ಕೂರಿಸಿಕೊಂಡು ಕರ್ಣನ ಜನ್ಮರಹಸ್ಯವನ್ನು ಹೇಳುತ್ತಾನೆ. ನಿಮ್ಮಲ್ಲಿ ಯಾದವರು, ಕೌರವರು ಎಂಬ ಭೇದವಿಲ್ಲ. ಈ ಭೂಮಿಗೆ ನಿಜವಾಗಿ ನೀನೇ ಒಡೆಯನಾಗಬೇಕು. ಕುಂತಿ ಪಡೆದ ಐದುಮಂತ್ರಗಳಲ್ಲಿ ನೀನೆ ಮೊದಲಿಗ, ಎರಡನೆಯವನು ಯುಧಿಷ್ಠಿರ, ಮೂರನೆಯವನು ಕಲಿಭೀಮ, ನಾಲ್ಕನೆಯವನು ಅರ್ಜುನ, ಕೊನೆಯ ಐದನೆಯ ಮಂತ್ರದಲ್ಲಿ ಮಾದ್ರಿಗೆ ನಕುಲ-ಸಹದೇವರು ಜನಿಸಿದರು. ನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ, ಕೌರವರು ಪಾಂಡವರು ನಿನ್ನ ಸೇವಕರಾಗುತ್ತಾರೆ. ಇದನ್ನು ಬಿಟ್ಟು ದುರ್ಯೋಧನನ ಎಂಜಲಿಗೆ ಕೈಚಾಚುವುದು ಸರಿಯೆ? ಎಡಭಾಗದಲ್ಲಿ ಕೌರವರು, ಬಲಭಾಗದಲ್ಲಿ ಪಾಂಡವರು, ನಡುವಿನಲ್ಲಿ ಮಾದ್ರರು, ಮಾಗಧರು, ಯಾದವರು ಇರುತ್ತಾರೆ. ಇವರ ನಡುವೆ ರಾಜನಾಗಿ ವಿಜೃಂಭಿಸುವುದನ್ನು ಬಿಟ್ಟು ದುರ್ಯೊಧನ ಕರೆದಾಗ ಸೇವಕನಂತೆ ಸ್ವಾಮಿ ನಿಮ್ಮ ಪ್ರಸಾದ ಎನ್ನುವುದು ಕಷ್ಟವಾಗುವುದಿಲ್ಲವೆ ? ಆದ್ದರಿಂದ ಪಾಂಡವರ ಪಕ್ಷವನ್ನು ಸೇರುವಂತೆ ಕೃಷ್ಣನು ಆಮಿಷಗಳನ್ನು ಒಡ್ಡುತ್ತಾನೆ.
ಗಾದೆಗಳು
ನಗರದ ಉದ್ಯಾನಗಳಲ್ಲಿ ಗಿಡಗಳನ್ನು ಪಕ್ಷಿ, ಪ್ರಾಣಿಗಳ ಅಥವಾ ವಿವಿಧ ವಸ್ತುಗಳ ಆಕಾರಗಳಲ್ಲಿ ಬೆಳೆಸಿರುವುದನ್ನು ನೋಡಿರಬಹುದು. ಇದು ಸಾಧ್ಯವಾಗುವುದು ಅವು ಇನ್ನೂ ಎಳೆಯಾಗಿರುವಾಗಲೆ ಅವುಗಳನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ಬೆಳೆಸಿದ್ದರಿಂದ ಗಿಡಗಳು ಬಲಿತ ಮೇಲೆ ಹೀಗೆ ಬಗ್ಗಿಸುವುದು ಸಾಧ್ಯವಿಲ್ಲ. ಹೆಚ್ಚು ಬಲ ಪ್ರಯೋಗದಿಂದ ಬಗ್ಗಿಸಲು ಪ್ರಯತ್ನಿಸಿದರೆ ಕೊಂಬೆಗಳು ಮುರಿದೇ ಹೋಗುತ್ತವೆ. ಈ ಸಂಗತಿಯನ್ನು ಮನುಷ್ಯ ಪ್ರಪಂಚಕ್ಕೂ ಅನ್ವಯಿಸಿ ನೋಡಿದ್ದರಿಂದ ಮೇಲಿನ ಗಾದೆ ಹುಟ್ಟಿಕೊಂಡಿದೆ. ಮಕ್ಕಳ ಮನಸ್ಸು ಎಳೆಯ ಗಿಡದಂತೆ ಮೃದುವಾಗಿರುತ್ತದೆ. ಆಗ ಉಚಿತ ಬೋಧನೆ, ಅಗತ್ಯ ಬಿದ್ದರೆ ಸ್ವಲ್ಪ ದಂಡನೆ, ಉತ್ತಮ ಆದರ್ಶಗಳ ಮೂಲಕ ಒಳ್ಳೆಯ ಗುಣಗಳು ಮೈಗೂಡುವಂತೆ ಮಾಡುವುದು ಸಾಧ್ಯ. ಅನುಕೂಲ ವಾತಾವರಣ, ಆದರ್ಶ ಶಿಕ್ಷಣ ದೊರೆತ ಮಕ್ಕಳು ಉತ್ತಮವೂ ದೃಢವೂ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ದೇಶದ ಗೌರವಸ್ಥೆ ಪ್ರಜೆಗಳೂ, ಸಮಾಜದ ಸಭ್ಯ ಸದಸ್ಯರೂ ಆಗಿದ್ದೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ. ಆದರೆ, ಈಚೀಚೆಗೆ ಯುವಜನರಲ್ಲಿ ಕಾಣುತ್ತಿರುವ ಅಶಿಸ್ತು, ಸ್ವಾರ್ಥ, ದೌರ್ಜನ್ಯ, ಲೋಲುಪತೆ, ಅಸಭ್ಯ ವರ್ತನೆ ಇವುಗಳನ್ನು ಗಮನಿಸಿದಾಗ ಇವರಿಗೆ ಬಾಲ್ಯದಲ್ಲಿ ಉತ್ತಮವಾದ ಶಿಕ್ಷಣ ದೊರೆತಿರಲಾರದು. ಹೀಗೆ ಬೆಳೆದವರನ್ನು ತಿದ್ದುವುದು ಬಹಳ ಕಷ್ಟ. ಅಂತಹ ಸಂದರ್ಭದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬ ಗಾದೆ ಮಾತನ್ನು ಬಳಸುತ್ತಾರೆ.

ಉತ್ತರ 30:
ಅ. ವ್ಯಾವಹಾರಿಕ ಎಂದರೆ ಜೀವದ ಭಾಷೆ. ಇದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಉದಾಹರಣೆ ಕನ್ನಡ, ತುಳು, ಕೊಂಕಣಿ, ಉರ್ದು ಇತ್ಯಾದಿ. ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಬಳಸುವ ಭಾಷೆಯೇ ಗ್ರಾಂಥಿಕ ಭಾಷೆಗಳು ವ್ಯಾವಹಾರಿಕವಾಗಬೇಕಿಲ್ಲ ಹಾಗೆಯೇ ಎಲ್ಲಾ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕೆಂಬ ನಿಯಮವಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಗ್ರಾಂಥಿಕ ಭಾಷೆಯಲ್ಲ. ದೇವಭಾಷೆ ಎನಿಸಿರುವ ಸಂಸ್ಕೃತ ಗ್ರಾಂಥಿಕ ಭಾಷೆಯಾಗಿದೆ. ಆ) ನವಶಿಲಾಯುಗದ ಮಾನವ ತನ್ನ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ ಬದುಕು ಮೊದಲಾದ ಭಾವನೆಯನ್ನು ಹೊಂದಲು ಪ್ರಾರಂಭಿಸಿದಂದಿನಿಂದ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಓದು ಬರಹ ಬಾರದೆ ಇದ್ದರೂ ತಾನು ಕೆಲಸಕ್ಕೆ ಹೋದ ದಿನಗಳನ್ನು ದಿನನಿತ್ಯ ಗೋಡೆಯ ಮೇಲೆ ಒಂದೊಂದು ಗೆರೆ ಎಳೆದು ಗುರುತಿಸಿ ಕೊನೆಯಲ್ಲಿ ಲೆಕ್ಕಹಾಕಿ ಸಂಬಳ ಪಡೆಯುತ್ತಾನೆ. ಇದನ್ನು ಲಿಪಿಯ ಉಗಮ ಕಾಲ ಎನ್ನುವರು.

I.
ಉತ್ತರ 31:
ಬಿ) ಮಹರ್ಷಿ

ಉತ್ತರ 32:
ಸಿ) ಆವರಣ

ಉತ್ತರ 33:
ಡಿ) ಮಿಶ್ರವಾಕ್ಯ

ಉತ್ತರ 34:
ಎ) ತದ್ಧಿತಾಂತಾವ್ಯಯ

ಉತ್ತರ 35:
ಸಿ) ಅಂಕಿತನಾಮ

ಉತ್ತರ 36:
ಬಿ) ಮಾಟ .

ಉತ್ತರ 37:
ಎ) ಸಂಪ್ರದಾನ

ಉತ್ತರ 38:
ಡಿ) ಸಾಕು

ಉತ್ತರ 39:
ಸಿ) ಬೇಹಾರಿ

ಉತ್ತರ 40:
ಡಿ) ನಿಷೇಧಾರ್ಥಕ

II.
ಉತ್ತರ 41:
ಹಿಂದೂಸ್ಥಾನಿ

ಉತ್ತರ 42:
ಬಹುವೀಹಿಸಮಾಸ

ಉತ್ತರ 43:
ಕುದುರೆ

ಉತ್ತರ 44:
ದ್ವಿರುಕ್ತಿ

ಉತ್ತರ 45:
Karnataka Board SSLC Kannada Question Paper March 2018 3

ಉತ್ತರ 46:
ಅಲಂಕಾರದ ಹೆಸರು : ದೃಷ್ಟಾಂತಾಲಂಕಾರ
ಲಕ್ಷಣ: ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ-ಪ್ರತಿಬಿಂಬ ಭಾವವು ತೋರಿ ಬಂದರೆ ಅದು ದೃಷ್ಟಾಂತಾಲಂಕಾರ
ಸಮನ್ವಯ: ಉಪಮೇಯ : ಮಾತುಬಲ್ಲವನಿಗೆ ಜಗಳವಿಲ್ಲ (ಪ್ರತಿಬಿಂಬ)
ಉಪಮಾನ : ಊಟ ಬಲ್ಲವನಿಗೆ ರೋಗವಿಲ್ಲ (ಬಿಂಬ) ಇಲ್ಲಿ ಊಟಬಲ್ಲವನಿಗೆ ರೋಗವಿಲ್ಲ ಎಂಬ ಉಪಮಾನ ವಾಕ್ಯಕ್ಕೂ ಮಾತುಬಲ್ಲವನಿಗೆ ಜಗಳವಿಲ್ಲ ಎಂಬ ಉಪಮೇಯ ವಾಕ್ಯಕ್ಕೂ ಅರ್ಥ ಸಾದೃಶ್ಯದಿಂದ ಪರಸ್ಪರ ಬಿಂಬ ಪ್ರತಿಬಿಂಬ ಭಾವವು ಕಂಡುಬರುತ್ತಿರುವುದರಿಂದ ಈ ಮೇಲಿನ ಲಕ್ಷವು ದೃಷ್ಟಾಂತ ಅಲಂಕಾರವಾಗಿದೆ.
ಅಥವಾ
ಅಲಂಕಾರದ ಹೆಸರು : ಉಪಮಾಲಂಕಾರ
ಲಕ್ಷಣ: ಎರಡು ವಸ್ತುಗಳಿಗೆ ಇರುವ ಪರಸ್ಪರ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
ಸಮನ್ವಯ: ಉಪಮೇಯ : ಗುಂಡು ಸುರಿಯುವುದು ಉಪಮಾನ: ಸಿಡಿಲು ಸಿಡಿಯುವುದು ಉಪಮಾವಾಚಕ: ಹಾಂಗ (ಅಂತೆ)
ಸಮಾನಧರ್ಮ: ತೀವ್ರತೆ (ಲುಪ್ತವಾಗಿದೆ) ಇಲ್ಲಿ ಉಪಮೇಯವಾದ ಗುಂಡು ಹಾರಿಸುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಸಾದೃಶ್ಯವಿರುವಂತೆ ಹೋಲಿಸಲಾಗಿದೆ.

I
ಉತ್ತರ 47:
ಕೂಡಿ ಬಾಳಿದರೆ ಸ್ವರ್ಗ ಸುಖ : ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಇದಕ್ಕೆ ಪೂರಕವಾದ ಗಾದೆಯಾಗಿದೆ. ಸಾಗರದಲ್ಲಿನ ಒಂದು ಹನಿ ನೀರಿಗೂ ಸಾಗರದಷ್ಟೇ ಶಕ್ತಿಯಿದೆ. ಆದರೆ ಅದನ್ನು ಸಾಗರದಿಂದ ಬೇರ್ಪಡಿಸಿದಾಗ ಯಾವ ಶಕ್ತಿಯೂ ಇರುವುದಿಲ್ಲ. ಇದೇರೀತಿ ಸಾಮಾಜಿಕ ಬದುಕಿನಲ್ಲಿಯೂ ವ್ಯಕ್ತಿಗಳು ಒಟ್ಟಾಗಿ ನಡೆದರೆ ಎಲ್ಲವನ್ನೂ ಸಾಧಿಸಬಹುದು. ಮುದುಕನೊಬ್ಬ ಸಾಯುವ ವೇಳೆಯಲ್ಲಿ ಸದಾ ಜಗಳವಾಡುವ ತನ್ನ ನಾಲ್ಕು ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಚೆನ್ನಾಗಿ ತೋರಿಸಿಕೊಟ್ಟನು. ನಾಲ್ಕು ಜನರಿಗೆ ಎರಡೆರಡು ಕೋಲುಗಳನ್ನು ತರಲು ಹೇಳಿ ಒಂದೊಂದು ಮುರಿಯಲು ಹೇಳಿದನು. ಎಲ್ಲರೂ ಬಿಡಿಬಿಡಿಯಾಗಿ ಮುರಿದರು. ಉಳಿದ ನಾಲ್ಕು ಕೋಲುಗಳನ್ನು ದಾರದಿಂದ ಕಟ್ಟಿ ಒಬ್ಬೊಬ್ಬರಾಗಿ ಮುರಿಯಲು ಹೇಳಿದನು. ಆದರೆ ಸಾಧ್ಯವಾಗಲಿಲ್ಲ. ನಾಲೂ ಜನರು ಒಟ್ಟಾಗಿ ಮುರಿಯಿರಿ ಎನ್ನಲು, ಎಲ್ಲರೂ ಕೂಡಿ ಮುರಿದರು. ಈ ಸರಳ ಅನುಭವದಿಂದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿಕೊಟ್ಟನು. ಕೂಡಿ ಬಾಳಿದರೆ ಅನ್ಯರು ನಮ್ಮನ್ನೇನೂ ಮಾಡಲಾರರು ಎಂಬುದು ತಿಳಿದು ಬರುತ್ತದೆ.

ಮಾಡಿದ್ದುಣೋ ಮಹರಾಯ : ಗಾದೆಗಳು ನೂರು ಮಾತುಗಳಲ್ಲಿ ಹೇಳಲಾಗದ ವಿಚಾರವನ್ನು ಸರಳವಾಗಿ ಹೇಳುತ್ತವೆ. ಗಾದೆಗಳಿಂದ ಜೀವನದಲ್ಲಿ ಅನೇಕ ರೀತಿಯಲ್ಲಿ ಮಾರ್ಗದರ್ಶನವನ್ನು ಪಡೆಯಬಹುದು. ಅಂತಹ ಮಾರ್ಗದರ್ಶಿ ಗಾದೆಗಳಲ್ಲೊಂದು ಮಾಡುದ್ದುಣೋ ಮಹಾರಾಯ, ಜೀವನದಲ್ಲಿ ಮಾಡುವ ಅನೇಕ ಕಾರ್ಯಗಳಲ್ಲಿ ಒಳ್ಳೆಯ ಕಾರ್ಯಗಳೂ ಇರುತ್ತವೆ. ಕೆಟ್ಟ ಕಾರ್ಯಗಳೂ ಇರುತ್ತವೆ. ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಫಲ ದೊರೆತರೆ, ಕೆಟ್ಟ ಕೆಲಸಗಳಿಗೆ ಕೆಟ್ಟ ಫಲ ದೊರೆಯುತ್ತದೆ. ಇರು ಪ್ರಕೃತಿ ನಿಯಮ. ಆದರೆ ಮಾನವನು ಕೆಟ್ಟ ಕಾರ್ಯಗಳನ್ನು ಮಾಡಿಯೂ ಒಳ್ಳೆಯ ಫಲವನು ಬಯಸುತ್ತಾನೆ. ಆದರೆ ಪಾಪ ಕಾರ್ಯಗಳಿಗೆ ಪಾಪದ ಫಲವನ್ನು ಬಯಸುವುದಿಲ್ಲ. ಆದರೆ ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸಲೇಬೇಕು. ಜಗತ್ತಿನಲ್ಲಿ ಒಳಿತನ್ನು ಬಯಸಿದ್ದಲ್ಲಿ ಕನಿಷ್ಟ ಒಳ್ಳೆಯ ಕಾರ್ಯಗಳನ್ನಾದರೂ ಮಾಡಲು ಯೋಚಿಸಬೇಕು. ಇಲ್ಲದಿದ್ದರೆ ಮಾಡಿದ್ದುಣ್ಣೆ ಮಹರಾಯ ಎಂಬಂತೆ ಶಿಕ್ಷೆ ಅನುಭವಿಸುವುದು ತಪ್ಪಿದ್ದಲ್ಲ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ: ನಗರದ ಉದ್ಯಾನಗಳಲ್ಲಿ ಗಿಡಗಳನ್ನು ಪಕ್ಷಿ, ಪ್ರಾಣಿಗಳ ಅಥವಾ ವಿವಿಧ ವಸ್ತುಗಳ ಆಕಾರಗಳಲ್ಲಿ ಬೆಳೆಸಿರುವುದನ್ನು ನೋಡಿರಬಹುದು. ಇದು ಸಾಧ್ಯವಾಗುವುದು ಅವು ಇನ್ನೂ ಎಳೆಯಾಗಿರುವಾಗಲೆ ಅವುಗಳನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ಬೆಳೆಸಬೇಕು. ಗಿಡಗಳು ಬಲಿತ ಮೇಲೆ ಹೀಗೆ ಬಗ್ಗಿಸುವುದು ಸಾಧ್ಯವಿಲ್ಲ. ಹೆಚ್ಚು ಬಲ ಪ್ರಯೋಗದಿಂದ ಬಗ್ಗಿಸಲು ಪ್ರಯತ್ನಿಸಿದರೆ ಕೊಂಬೆಗಳು ಮುರಿದೇ ಹೋಗುತ್ತವೆ. ಈ ಸಂಗತಿಯನ್ನು ಮನುಷ್ಯ ಪ್ರಪಂಚಕ್ಕೂ ಅನ್ವಯಿಸಿ ನೋಡಿದ್ದರಿಂದ ಮೇಲಿನ ಗಾದೆ ಹುಟ್ಟಿಕೊಂಡಿದೆ. ಮಕ್ಕಳ ಮನಸ್ಸು ಎಳೆಯ ಗಿಡದಂತೆ ಮೃದುವಾಗಿರುತ್ತದೆ. ಆಗ ಉಚಿತ ಬೋಧನೆ, ಅಗತ್ಯ ಬಿದ್ದರೆ ಸ್ವಲ್ಪ ದಂಡನೆ, ಉತ್ತಮ ಆದರ್ಶಗಳ ಮೂಲಕ ಒಳ್ಳೆಯ ಗುಣಗಳು ಮೈಗೂಡುವಂತೆ ಮಾಡುವುದು ಸಾಧ್ಯ. ಅನುಕೂಲ ವಾತಾವರಣ, ಆದರ್ಶ ಶಿಕ್ಷಣ ದೊರೆತ ಮಕ್ಕಳು ಉತ್ತಮವೂ ದೃಢವೂ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ದೇಶದ ಗೌರವಸ್ಥೆ ಪ್ರಜೆಗಳೂ, ಸಮಾಜದ ಸಭ್ಯ ಸದಸ್ಯರೂ ಆಗಿದ್ದೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ. ಆದರೆ, ಈಚೀಚೆಗೆ ಯುವಜನರಲ್ಲಿ ಕಾಣುತ್ತಿರುವ ಅಶಿಸ್ತು, ಸ್ವಾರ್ಥ, ದೌರ್ಜನ್ಯ, ಲೋಲುಪತೆ, ಅಸಭ್ಯ ವರ್ತನೆ ಇವುಗಳನ್ನು ಗಮನಿಸಿದಾಗ ಇವರಿಗೆ ಬಾಲ್ಯದಲ್ಲಿ ಉತ್ತಮವಾದ ಶಿಕ್ಷಣ ದೊರೆತಿರಲಾರದು. ಹೀಗೆ ಬೆಳೆದವರನ್ನು ತಿದ್ದುವುದು ಬಹಳ ಕಷ್ಟ. ಅಂತಹ ಸಂದರ್ಭದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬ ಗಾದೆ ಮಾತನ್ನು
ಬಳಸುತ್ತಾರೆ.

ದಿನಾಂಕ : 12-08-2018

48:
ಇಂದ,
ಹರ್ಷಿಣಿ
ವಿವೇಕಾನಂದ ಪ್ರೌಢಶಾಲೆ
10ನೇ ತರಗತಿ ‘ಬಿ’ ವಿಭಾಗ, ವಿಜಯಪುರ

ಇವರಿಗೆ,
ಸಂಪಾದಕರು,
ಹೊಸ ದಿಗಂತ ದಿನಪತ್ರಿಕೆ,
ಬಳೆಪೇಟೆ, ವಿಜಯಪುರ.
ಮಾನ್ಯರೇ,

ವಿಷಯ : ಗಣರಾಜ್ಯೋತ್ಸವ ಆಚರಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ಶಾಲೆಯಲ್ಲಿ ದಿನಾಂಕ 26-01-2018 ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕರಾದ ಶ್ರೀ ದೊರೈಭಗವಾನ್ ರವರು ಭಾಗವಹಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂದು ದೇಶ ಭಕ್ತಿಯನ್ನು ಮೂಡಿಸುವಂತಹ ಗೀತೆಗಳು, ನೃತ್ಯ, ಸ್ತಬ್ದ ಚಿತ್ರಗಳು ಇದ್ದು ಎಲ್ಲರನ್ನೂ ರಂಜಿಸಿದವು. ಈ ಪತ್ರದೊಂದಿಗೆ ಸಚಿತ್ರ ವರದಿಯನ್ನು ಕಳುಹಿಸುತ್ತಿದ್ದೇನೆ. ಅದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೇಳಿಕೊಳ್ಳುತ್ತೇನೆ. ಧನ್ಯವಾದಗಳೊಂದಿಗೆ.

ತಮ್ಮ ವಿಶ್ವಾಸಿ.
ಹರ್ಷಿಣಿ

ಅಥವಾ
ಶ್ರೀ

ದಿನಾಂಕ : 30-1-2018

ಕ್ಷೇಮ
ಅಶೋಕ
10ನೇ ತರಗತಿ,
ಸರ್ಕಾರಿ ಪ್ರೌಢಶಾಲೆ, ಹಾಸನ.

ಮಾತೃಶ್ರೀಯವರಿಗೆ,
ನಿಮ್ಮ ಮಗ ಮಾಡುವ ಅನಂತ ನಮಸ್ಕಾರಗಳು.
ನಾನು ಇಲ್ಲಿ ಕ್ಷೇಮ. ಅಲ್ಲಿ ನಿಮ್ಮ ಕ್ಷೇಮಸಮಾಚಾರಕ್ಕೆ ಪತ್ರ ಬರೆಯಿರಿ. ನ
ಮ್ಮ ಶಾಲೆಯಲ್ಲಿ ಇದೇ ತಿಂಗಳು 26ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ನಾನು ಈ ವಾರ್ಷಿಕೋತ್ಸವದಲ್ಲಿ ನಾಟಕದಲ್ಲಿ ಭಾಗವಹಿಸಿದ್ದೆ. ಈ ಕಾರ್ಯಕ್ರಮವನ್ನು ಶ್ರೇಷ್ಠ ವಿಜ್ಞಾನಿ ಸಿ.ಎನ್.ಆರ್ ರಾವ್ ರವರು ಉದ್ಘಾಟಿಸಿದರು. ಕಾರ್ಯಕ್ರಮವು ಸಂಜೆ ಆರು ಘಂಟೆಗೆ ಪ್ರಾರಂಭವಾಯಿತು. ಹಾಡು, ನೃತ್ಯ, ನಾಟಕ ಎಲ್ಲವೂ ವಾರ್ಷಿಕೋತ್ಸವದಲ್ಲಿ ಸಮ್ಮಿಳಿತಗೊಂಡಿದ್ದವು.ಈ ವಾರ್ಷಿಕೋತ್ಸವ ಸಮಾರಂಭ ಕುವೆಂಪು ಮಂದಿರದಲ್ಲಿ ನಡೆಯಿತು.ಒಟ್ಟಾರೆ ಕಾರ್ಯಕ್ರಮವು ಅತ್ಯುದ್ಭುತವಾಗಿ ಮೂಡಿ ಬಂತು. ನಮ್ಮ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತವೆ. ನಾನು ಇಲ್ಲಿ ಚೆನ್ನಾಗಿ ಓದುತ್ತಿದ್ದೇನೆ. ನನ್ನ ಬಗ್ಗೆ ಚಿಂತಿಸಬೇಡಿ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ತೀರ್ಥರೂಪುರವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಇನ್ನೇನು ವಿಷಯವಿಲ್ಲ. ಬಂದಾಗ ಎಲ್ಲ ವಿಚಾರಗಳನ್ನು ಮಾತನಾಡೋಣ.

ಇಂತಿ ನಮಸ್ಕಾರಗಳೊಂದಿಗೆ
ನಿಮ್ಮ ಮಗ ಅಶೋಕ

ಹೊರವಿಳಾಸ:
ಶ್ರೀಮತಿ ಜಯಲಕ್ಷ್ಮಿ
ಜಯಲಕ್ಷ್ಮಿಪುರಂ, ಮೈಸೂರು.

ಉತ್ತರ 49:
ತ್ಯಾಜ್ಯವಸ್ತುಗಳ ನಿರ್ವಹಣೆ: ತ್ಯಾಜ್ಯವಸ್ತುಗಳು ಎಂದರೆ ಉಪಯೋಗಿಸಲು ಯೋಗ್ಯವಲ್ಲದ ವಸ್ತುಗಳು. ಇಂತಹ ವಸ್ತುಗಳು ಅನವಶ್ಯಕವಾಗಿ ಹೊರಹಾಕುವ ಬದಲು ಅದನ್ನೇ ಉಪಯೋಗಿಸಿ ಹೊಸ ವಸ್ತುಗಳನ್ನು ತಯಾರಿಸಬಹುದು. ಆಗ ವಸ್ತುಗಳು ಉಪಯೋಗಕ್ಕೂ ಬರುತ್ತದೆ, ಪರಿಸರದಲ್ಲಿ ಮಾಲಿನ್ಯವು ಕಡಿಮೆಯಾಗುತ್ತದೆ. ಇದನ್ನೇ ಕಸದಿಂದ ರಸವನ್ನು ತಯಾರಿಸುವುದು ಎಂದು ಹೇಳುವುದು. ಭಾರತ ಒಂದು ಅಭಿವೃದ್ಧಿಹೊಂದುತ್ತಿರುವ ರಾಷ್ಟ, ಜೊತೆಗೆ ಅತಿಯಾದ ಜನಸಂಖ್ಯೆ, ಹಳ್ಳಿಗಳ ದೇಶವಾಗಿರುವ ನಮ್ಮ ದೇಶದಲ್ಲಿ ಅವಶ್ಯವಾಗಿ ತ್ಯಾಜ್ಯ ವಸ್ತುಗಳ ಮರುಬಳಕೆ ಆಗಲೇ ಬೇಕು. ಮಾಲಿನ್ಯವನ್ನು ತಡೆಗಟ್ಟಲು ಇದು ಸಹಾಯಕಾರಿಯಾಗುತ್ತದೆ. ಸಿಡರ್ ಲ್ಯಾಂಡ್ ನಂತಹ ಮುಂದುವರಿದ ದೇಶಗಳಲ್ಲಿಯೇ ಪ್ಲಾಸ್ಟಿಕ್ ಕವರ್ ಗಳಲ್ಲಿ ಸುಂದರವಾದ ಪಕ್ಷಿಗಳನ್ನು ಮಾಡಿ ಪ್ಲಾಸ್ಟಿಕ್ ಮರಗಳ ಮೇಲೆ ಇಡುತ್ತಾರೆ. ಹರಿದು ಹೋಗಿರುವ ಪೇಪರ್‌ಗಳಲ್ಲಿ ಸುಂದರವಾದ ಹೂವುಗಳನ್ನು ಮಾಡುತ್ತಾರೆ. ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಹಾಕಿ ಮಾಲಿನ್ಯವನ್ನು ಮಾಡುವುದಕ್ಕಿಂತಲೂ ಅವುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದರಿಂದ ದೇಶದ ಅಭಿವೃದ್ಧಿ ಯಾಗುವುದಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಂತಾಗುತ್ತದೆ.

ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲತಾಣಗಳ ಸದ್ಬಳಕೆ: ಇಂದಿನ ಯುಗವನ್ನು ವಿಜ್ಞಾನದ ಯುಗ ಎನ್ನುತ್ತಾರೆ. ಏಕೆಂದರೆ ಇಂದು ಈ ಲೋಕ ವಿಜ್ಞಾನಮಯವಾಗಿದೆ. ಈ ಹೊಸ ಕಾಲದಲ್ಲಿ ಬದುಕುತ್ತಿರುವ ನಾವು ಎಷ್ಟೋ ವಿಷಯಗಳಲ್ಲಿ ಹಿಂದಿನವರಿಗಿಂತ ಅದೃಷ್ಟವಂತರು. ಈಗ ಇಂತಹ ಅನುಕೂಲವಿಲ್ಲ ಎನ್ನುವಂತೆಯೇ ಇಲ್ಲ. ನಮಗೆ ಬೇಕಾದ ಎಲ್ಲಾ ಬಗೆಯ ವಸ್ತುಗಳೂ ಈಗ ಸಿಗುತ್ತವೆ. ಎಲ್ಲಾ ಬಗೆಯ ಅನುಕೂಲಗಳೂ ಸಿಗುತ್ತವೆ. ಇದೇ ಈ ಆಧುನಿಕ ಯುಗದ ಹಿರಿಮೆ. ಮಂಗನಂತಿದ್ದ ಮಾನವ ಮೇಧಾವಿ ಮಾನವನಾದಂತೆ ಅವನ ಸಾಮಾನ್ಯ ಬುದ್ದಿಯೂ ಮಹಾಬುದ್ದಿಯಾಗಿ ಬೆಳೆದಿದೆ. ಅವನ ಅಗಾಧವಾದ ವೈಜ್ಞಾನಿಕ ಸಾಧನೆಯ ಫಲವಾಗಿಯೇ ನಮ್ಮ ಜೀವನ ಸುಲಭವಾಗುತ್ತಿದೆ. ಸರಳವಾಗುತ್ತಿದೆ. ಸುಖಿಯೂ ಆಗುತ್ತಿದೆ.

ವಿಜ್ಞಾನಿಗಳು ತ್ಯಾಗ ಜೀವಿಗಳು, ಶ್ರಮಜೀವಿಗಳು. ಅವರು ಜನತೆಯ ಅನುಕೂಲಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಡುತ್ತಾರೆ. ವರ್ಷಾನುಗಟ್ಟಲೇ ಶೋಧನೆ – ಸಂಶೋಧನೆಗಳನ್ನು ಮಾಡಿ, ಏನಾದರೂ ಒಂದು ಅದ್ಭುತವನ್ನು ಕಂಡು ಹಿಡಿಯುತ್ತಾರೆ. ಅದು ಸಾಮಾನ್ಯ ಜನತೆಗೆ ವರವೇ ಆಗುತ್ತದೆ. ಟೆಲಿಫೋನು, ರೇಡಿಯೋ, ಟೆಲಿವಿಶನ್, ಕಂಪ್ಯೂಟರ್ ಹೀಗೆ ನೂರಾರು ಬಗೆಯ ತಂತ್ರಗಳು, ಹೀಗೆ ಹೇಳಿದಷ್ಟೂ ಮುಗಿಯುವುದೇ ಇಲ್ಲ.ಆಧುನಿಕ ವಿಜ್ಞಾನದ ಕೊಡುಗೆಯಾದ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ಪ್ರತಿಯೊಂದು ಹಂತದಲ್ಲೂ ಸಹಕಾರಿಯಾಗಿವೆ. ಉದಾ : ಕಂಪ್ಯೂಟರ್ ಇದರಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸಕಲ ಮಾಹಿತಿಗಳು ಅಂತರ್ ಜಾಲದ ಮೂಲಕ ತಿಳಿಯುತ್ತದೆ. ವಿದ್ಯಾರ್ಥಿಗಳು ತಮಗಿರುವ ಸಮಸ್ಯೆಗಳನ್ನು ಇದರ ಮೂಲಕ ನಿವಾರಿಸಿಕೊಳ್ಳಬಹುದು. ಅಲ್ಲದೆ ತಾವೇ ಹೊಸ ಹೊಸ ವಿಚಾರಗಳನ್ನು ಕಲಿಯಲು ಇದು ಸಹಾಯ ಮಾಡುತ್ತದೆ. ಯಾವುದೇ ವಿಷಯದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಸಾಕು, ಅದರ ಫಲಿತಾಂಶವನ್ನು ನಿಖರವಾಗಿ ತೋರಿಸಿ ಬಿಡುತ್ತದೆ. ಆದರೆ ಎಲ್ಲವನ್ನು ಮಿತವಾಗಿ ಬಳಸಿದಾಗ ಮಾತ್ರ ಅದರ ಸದ್ಬಳಕೆ ಸಾದ್ಯ.

ಕರ್ನಾಟಕದ ನದಿ ನೀರಿನ ಸಮಸ್ಯೆಗಳು : ಕರ್ನಾಟಕದಲ್ಲಿ ಸರಿಯಾದ ರೀತಿಯಲ್ಲಿ ನೀರಿನ ಬಳಕೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮಳೆಗಾಲದಲ್ಲಿ ಶೇಖರಣೆಯಾದ ನೀರು ಬೇಸಿಗೆಯಲ್ಲೂ ಪ್ರಯೋಜನಕ್ಕೆ ಬರಬೇಕೆಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ಅಣೆಕಟ್ಟುಗಳು ಹೆಚ್ಚಾಗಬೇಕು. ಇತರ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅನೇಕ ನದಿಗಳಿವೆ. ದೇಶದ ನದಿ, ಕಾಡು, ಮರುಭೂಮಿ, ಪರ್ವತ ಮೊದಲಾದವುಗಳಿಗೆ. ಭಾಷೆ-ಗಡಿರೇಖೆಗಳ ಹಂಗಿಲ್ಲ. ತಾನು ಇಂಥಾ ರಾಜ್ಯದಲ್ಲಿ ಮಾತ್ರ ಹರಿಯುತ್ತೇನೆ ಎಂದು ಅದು ಎಂದೂ ಹೇಳಿಲ್ಲ. ಕರ್ನಾಟಕ ತಮಿಳುನಾಡುಗಳ ನಡುವೆ ಹರಿಯುವ ಕಾವೇರಿಗೆ ತಾನು ಎರಡು ಭಾಷೆಗಳ, ಎರಡು ರಾಜ್ಯಗಳ ನಡುವೆ ಎದ್ದಿರುವ ದೊಡ್ಡದೊಂದು ವಿವಾದದ ಕೇಂದ್ರಬಿಂದು ಎಂದೂ ಗೊತ್ತಿಲ್ಲ. ಕಾವೇರಿಗೆ ಕರ್ನಾಟಕದ ಜನ ಹೇಗೆ ಮಕ್ಕಳೊ ತಮಿಳರೂ ಹಾಗೆಯೇ, ಗಡಿ ರೇಖೆ ಹಾಕಿಕೊಂಡಿರುವ ನಾವು ನಮ್ಮ ಲಾಭಕ್ಕಾಗಿ ಅಣೆಕಟ್ಟು ಕಟ್ಟಿ ನಿಲ್ಲಿಸುತ್ತೇವೆ. ಕಾಲುವೆ ತೋಡಿ ನೀರನ್ನು ಬೇರೊಂದು ದಿಕ್ಕಿಗೆ ಹರಿಸುತ್ತೇವೆ.

ಅದು ಕೇವಲ ನಮ್ಮ ಸ್ವಾರ್ಥಕ್ಕಾಗಿ ನಾವು ಮಾಡಿಕೊಂಡಿರುವ ವ್ಯವಸ್ಥೆ ಅಷ್ಟೆ, ತನ್ನ ದಾರಿಯುದ್ದಕ್ಕೆ ಎಷ್ಟು ಊರುಗಳಿವೆಯೋ ಅಷ್ಟೂ ಊರುಗಳ ಬಾಯಾರಿಕೆ ತಣಿಸಲು ಬೇಕಾದಷ್ಟು ನೀರನ್ನು ಪ್ರತಿಯೊಂದು ನದಿಯೂ ಖಂಡಿತ ಒದಗಿಸುತ್ತದೆ. ಆದರೆ ರೈತರು ಅಕ್ಷರಸ್ಥರಾಗಿ ತಮ್ಮ ತಮ್ಮ ಹೊಲಗದ್ದೆಗಳ ಬಳಿಯಲ್ಲಿ ನೀರನ್ನು ಶೇಖರಿಸಿಕೊಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮಳೆಕೊಯ್ಲಿನಂಥ ಉತ್ತಮ ವೈಜ್ಞಾನಿಕ ವಿಧಾನವನ್ನು ಅನುಸರಿಸಿದರೆ ವರ್ಷ ಪೂರ್ತಿ ಎಲ್ಲಾ ನದಿಯಲ್ಲೂ ನೀರು ತುಂಬಿ ಹರಿಯುವಂತೆ ಮಾಡಬಹುದು. ನದಿಜೋಡಣೆ ಕಾರ್ಯಕ್ರಮವನ್ನು ಕೈಗೊಂಡಾಗ ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಒಂದೇ ರಾಜ್ಯದ ಒಳಗೆ ಇರುವ ಎರಡು ಪ್ರದೇಶಗಳಲ್ಲಿ ತದ್ವಿರುದ್ದ ಪರಿಸ್ಥಿತಿ ಇದೆ. ಒಂದು ಕಡೆ ತುಂಬಿ ಹರಿಯುವ ನದಿ, ಇನ್ನೊಂದು ಕಡೆ ಮಳೆಯಿಲ್ಲದೆ ಖಾಲಿ ಕೂತ ಬಯಲು ಪ್ರದೇಶ. ಈ ಅಸಮಾನತೆ ಕಳೆಯಲು ತುಂಬಿ ಹರಿಯುವ ನದಿಯಲ್ಲಿ ಹರಿದುಹೋಗುವ ಹೆಚ್ಚುವರಿ ನೀರನ್ನು ಬಯಲು ಸೀಮೆಯತ್ತ ಸಾಗಿಸಿದರೆ ಸ್ವಲ್ಪ ಸಮಸ್ಯೆಯನ್ನು ಬಗೆಹರಿಸಬಹುದು. ಇನ್ನೊಂದು ಪರಿಹಾರವೆಂದರೆ ಬೆಂಗಳೂರಿನಲ್ಲಿ ಹೊರಹಾಕುವ ಕೊಳಚೆಯನ್ನು ಸಂಸ್ಕರಿಸಿದರೆ ಕರ್ನಾಟಕದ ಐದಾರು ಜಿಲ್ಲೆಗಳಿಗೆ ನೀರುಣಿಸಬಹುದು. ಆದರೆ ಸರ್ಕಾರದೊಂದಿಗೆ ಜನ ಕೈ ಜೋಡಿಸಿದಾಗ ಮಾತ್ರ ಸಮಸ್ಯೆಯಿಂದ ಹೊರಬರಲು ಸಾಧ್ಯ.

Karnataka SSLC Kannada Model Question Papers

Karnataka SSLC Kannada Previous Year Question Paper June 2018 (1st Language)

Students can Download Karnataka SSLC Kannada Previous Year Question Paper June 2018 (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Previous Year Question Paper June 2018 (1st Language)

ಸಮಯ : 3 ಗಂಟೆ
ಅಂಕಗಳು : 100

ವಿಭಾಗ – ‘ಎ’
(ಪಠ್ಯಗಳ ಅಧ್ಯಯನ – ಗದ್ಯ ಪದ್ಯ, ಪೋಷಕ ಅಧ್ಯಯನ)

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
ಪ್ರಶ್ನೆ 1.
ಲಂಡನ್ನಿನಲ್ಲಿ ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು?

ಪ್ರಶ್ನೆ 2.
ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ?

ಪ್ರಶ್ನೆ 3.
ಮನೆಮಂಚಮ್ಮನ ಕತೆ ಹೇಳಿದ ಕವಿಯ ಹೆಸರೇನು?

ಪ್ರಶ್ನೆ 4.
ಭಗವದ್ಗೀತೆಯನ್ನು ರಚಿಸಿದವರು ಯಾರು?

ಪ್ರಶ್ನೆ 5.
ದುಷ್ಟಬುದ್ದಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?

ಪ್ರಶ್ನೆ 6.
ಹಕ್ಕಿಯು ಯಾವುದರ ಸಂಕೇತವಾಗಿದೆ?

ಪ್ರಶ್ನೆ 7.
ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?

ಪ್ರಶ್ನೆ 8.
ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?

ಪ್ರಶ್ನೆ 9.
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?

II ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 10 × 2 = 20

ಪ್ರಶ್ನೆ 10.
ಸಾಮ್ರಾಟರ ರಾಜ್ಯಾಭೀಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?

ಪ್ರಶ್ನೆ 11.
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವನ್ನು ತಿಳಿಸಿ.

ಪ್ರಶ್ನೆ 12.
ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?

ಪ್ರಶ್ನೆ 13.
ಹುಷ್ಟಬುದ್ಧಿಯು ತನ್ನ ತಂದೆಯನ್ನು ಸಾಕ್ಷಿ ಮಾಡಿ ಒಪ್ಪಿಸಿದ ಬಗೆಯನ್ನು ತಿಳಿಸಿ.

ಪ್ರಶ್ನೆ 14.
ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?

ಪ್ರಶ್ನೆ 15.
ದ್ರುಪದನ ಮಾತಿಗೆ ದ್ರೋಣನ ಪ್ರತಿಕ್ರಿಯೆಯನ್ನು ತಿಳಿಸಿ.

ಪ್ರಶ್ನೆ 16.
ಭಗತ್ ಸಿಂಗನು ಅಂತರ್ಮುಖಿಯಾಗಲು ಕಾರಣವಾದ ಒಕ್ಕಣೆಯನ್ನು ತಿಳಿಸಿ.

ಪ್ರಶ್ನೆ 17.
ಮೃಗದ ಬಾಹ್ಯ ಆಕಾರ ಹೇಗಿತ್ತು?

ಪ್ರಶ್ನೆ 18.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?

ಪ್ರಶ್ನೆ 19.
“ಬೀಸುಕಲ್ಲು” ಎಂಬ ಉತ್ತರ ಬರಲು ಹೇಳಿದ ಒಗಟನ್ನು ಬರೆಯಿರಿ.

III. ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ. 4 × 3 = 12

ಪ್ರಶ್ನೆ 20.
“ಸಾಮಾಜಿಕ ಕಾನೂನುಗಳ ಹರಿಕಾರ”

ಪ್ರಶ್ನೆ 21.
“ರಿಸಿಯರ ರೂಪಂ ಕಾಣ್ಣುಮಂದೀತನುಂ ಗಪಂಬಡುಗುಮ್”

ಪ್ರಶ್ನೆ 22.
“ಮಂಗಳ ಲೋಕದ ಅಂಗಳಕೇರಿ”

ಪ್ರಶ್ನೆ 23.
“ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ”

IV. ಈ ಕೆಳಗಿನ ಕವಿಗಳ/ಸಾಹಿತಿಗಳ ಸ್ಥಳ, ಕಾಲ, ಕೃತಿ, ಮತ್ತು ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ. 2 × 3 = 6

ಪ್ರಶ್ನೆ 24.
ಕುವೆಂಪು

ಪ್ರಶ್ನೆ 25.
ಸಾ.ರಾ. ಅಬೂಬಕ್ಕರ್ –

V
ಪ್ರಶ್ನೆ 26.
ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ. 1X3 = 3
Karnataka Board SSLC Kannada Question Paper June 2018 1

VI.
ಪ್ರಶ್ನೆ 27.
ಈ ಕೆಳಗಿನ ಪದ್ಯಭಾಗವನ್ನು ಓದಿ ಅರ್ಥ ಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾದರಿಸಿ ಸಾರಾಂಶ ಬರೆಯಿರಿ. 1 X 4 = 4
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಟ್ಟೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ

VII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 2 × 4 = 8

ಪ್ರಶ್ನೆ 28.
ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆಯೆಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. ಅಥವಾ ಶಬರಿಯ ಸಡಗರ, ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?

ಪ್ರಶ್ನೆ 29.
ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ. ಅಥವಾ ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ.

VIII.
ಪ್ರಶ್ನೆ 30.
ಈ ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 2 × 2 = 4
ಬೆಳಗಾವಿಯ ಒಂದು ಬಡಾವಣೆ, ಅಲ್ಲಿನ ನಿವಾಸಿಗಳು ಪ್ರತಿನಿತ್ಯ ಮನೆಯ ಕಸಗುಡಿಸಿ ತಂದು ರಸ್ತೆಗೆ ಸುರಿಯುತ್ತಿದ್ದರು. ಅವರಲ್ಲೊಬ್ಬರನ್ನು “ಕಸತಂದು ರಸ್ತೆಗೆ ಯಾಕೆ ಹಾಕೀರ? ತೊಟ್ಟೆಗೆ ಯಾಕೆ ಹಾಕಲ್ಲ?” ಎಂದು ಕೇಳಿದಾಗ ಹೀಗೆ ಗುಡುಗಿದರು; “ಮೊದದ್ದಾಗಿ, ತೊಟ್ಟಿ ಈ ರಸ್ತೆಯ ತುದೀಲಿದೆ. ಎರಡನೆಯದಾಗಿ, ನಾವ್ಯಾಕೆ ಅಲ್ಲಿಯವರೆಗೂ ತೆಗೆದುಕೊಂಡು ಹೋಗಿ ಹಾಕ್ಷೇಕು? ನಾವು ಹೊರಗೆ ಸುರೀತೀವಿ. ಸಂಬಳ ತಗೋತಾರಲ್ಲ ಮಹಾನಗರ ಪಾಲಿಕೆ ಆಳುಗಳು, ಅವರು ತಗೊಂಡು ಹೋಗಿ ಹಾಕ್ಲಿ ತೊಟ್ಟಿಲಿ”. “ಆದ್ರೆ ನಿಮ್ಮ ರಸ್ತೆನೇ ಕೊಳೆ ಆಗುತ್ತಲ್ಲ ಮನೆ ಮುಂದೆ ಕಸ ಹಾಕಿದ್ರೆ” ಅಂದಾಗ “ರಸ್ತೆ ನಮ್ಮು ಅಂತ ಯಾರು ಹೇಳಿದ್ರು ನಿಮಗೆ? ಈ ಮನೆ ನಮ್ಮು, ರಸ್ತೆ ಸರ್ಕಾರದ್ದು. ಅದನ್ನು ಸರಿಯಾಗಿ ಇಟ್ಟುಕೊಳ್ಳೋದು ಅವರ ಕೆಲಸ” ಅಂದರು. ಈ ಉದಾಹರಣೆ ನಮ್ಮ ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿರುವ ಅಕ್ಷಮ್ಯವಾದ ಬೇಜವಾಬ್ದಾರಿತವನ್ನು ಎತ್ತಿ ತೋರಿಸುತ್ತದೆ. ಪರಿಸರ ಸಂರಕ್ಷಣೆಯ ಸಮಸ್ತ ಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಪರಿಸರ ಸಂರಕ್ಷಣೆಯ ಸಮಸ್ತ ಜವಾಬ್ದಾರಿಯೂ ಸರ್ಕಾರದ್ದೇ ಎಂಬ ನಿರ್ಲಿಪ್ತ ಮನೋಭಾವವೇ ನಮ್ಮೆಲ್ಲ ಸಮಸ್ಯೆಗಳಿಗೂ ಕಾರಣ.

ಪರಿಸರ ಪ್ರಜ್ಞೆಯ ತೀವ್ರ ಅಭಾವ ಬಹುಸಾಮಾನ್ಯವಾದರೂ ಪರಿಸರವನ್ನು ಸಂರಕ್ಷಿಸಲು ಹೋರಾಟಕ್ಕೆ ನಿಲ್ಲುವ ಅಪೂರ್ವ ಪ್ರಯತ್ನಗಳನ್ನು ನಾವು ಆಗಾಗ ಅಪರೂಪವಾಗಿ ನೋಡಬಹುದು. ‘ಚಿಪ್ರೋ ಚಳವಳಿ’. ಇದಕ್ಕೊಂದು ಉತ್ತಮ ಉದಾಹರಣೆ. ಚಿಪ್ಟ್ – ಈ ಹೆಸರು ನಿಮಗೆ ವಿಚಿತ್ರವಾಗಿ ಕೇಳಬಹುದು. ಇದೊಂದು ಹಿಂದಿ ಭಾಷೆಯ ಪದ. ಅರ್ಥ: ಅಪ್ಪಿಕೋ, ತಬ್ಬಿಕೊ! ಈ ಚಳವಳಿ ಪ್ರಾರಂಭವಾದದ್ದು 1973ರ, ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಹಳ್ಳಿಯಲ್ಲಿ. ಈ ಚಳವಳಿಗೆ ಕಾರಣರಾದವರು ಮಂಡಲ್ ಹಳ್ಳಿಯ ಅನಕ್ಷರಸ್ಥ ಮಹಿಳೆಯರು.

ಪ್ರಶ್ನೆಗಳು:
(ಅ) ಚಿಪ್ಪೋ ಚಳವಳಿಯನ್ನು ಕುರಿತು ಬರೆಯಿರಿ.
(ಆ) ಪರಿಸರದ ಸ್ವಚ್ಛತೆಯ ಕುರಿತು ಜನಸಾಮಾನ್ಯರಲ್ಲಿರುವ ಸಾಮಾನ್ಯ ಮನೋಭವನೆಗಳೇನು?

ವಿಭಾಗ – ‘ಬಿ’.
(ಅನ್ವಯಿಕ ವ್ಯಾಕರಣ, ಅಲಂಕಾರ ಹಾಗೂ ಛಂದಸ್ಸು)

ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದುದನ್ನು ಆರಿಸಿ ಉತ್ತರಕ್ಕಾಗಿಯೇ ಕೊಟ್ಟಿರುವ ಜಾಗದಲ್ಲಿ ಕ್ರಮಾಕ್ಷರದೊಂದಿಗೆ ಬರೆಯಿರಿ. 10 × 1 = 10

ಪ್ರಶ್ನೆ 31.
“ಸಂಗ್ರಹಾಲಯ” ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಗುಣ ಸಂಧಿ
(ಬ) ಸವರ್ಣದೀರ್ಘ ಸಂಧಿ
(ಸಿ) ವೃದ್ಧಿ ಸಂಧಿ
(ಡಿ) ಅನುನಾಸಿಕ ಸಂಧಿ

ಪ್ರಶ್ನೆ 32.
ಸಂಭೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣಾ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿಹ್ನೆ.
(ಎ) ಅಲ್ಪವಿರಾಮ
(ಬ) ಅರ್ಧವಿರಾಮ
(ಸಿ) ಪೂರ್ಣವಿರಾಮ
(ಡಿ) ಉದ್ದರಣ

ಪ್ರಶ್ನೆ 33.
‘ಕರ್ಮಧಾರೆಯ’ ಸಮಾಜಕ್ಕೆ ಉದಾಹರಣೆಯಿದು
(ಎ) ನೆಯ್ದ ವಸ್ತ್ರ
(ಬ) ಮಹೀಪತಿ
(ಸಿ) ಕಣ್ಣೆರೆ
(ಡಿ) ಹೆದ್ದೊರೆ

ಪ್ರಶ್ನೆ 34.
ಕನ್ನಡ ವರ್ಣಮಾಲಿಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ.
(ಎ) ಐದು
(ಬ) ಒಂಬತ್ತು
(ಸಿ) ಹತ್ತು
(ಡಿ) ಹದಿಮೂರು

ಪ್ರಶ್ನೆ 35.
ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳನ್ನು ಹೀಗೆನ್ನುತ್ತೇವೆ.
(ಎ) ಕ್ರಿಯಾರ್ಥಕ
(ಬ) ಅನುಕರಣ
(ಸಿ) ಸಾಮಾನ್ಯ
(ಡಿ) ಸಂಬಂಧಾರ್ಥಕ

ಪ್ರಶ್ನೆ 36.
ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದ
(ಎ) ನೋಟ
(ಬ) ನೋಡಲು
(ಸಿ) ನೋಡುವ
(ಡಿ) ನೋಡದ

ಪ್ರಶ್ನೆ 37.
ಕಾರವಾರದಲ್ಲಿ ಮಲೇರಿಯಾ ಹಬ್ಬಿ, ವೀರೇಶ್ವರ ಪಾಠಕ್‌ರವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಅವರು ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು – ಈ ವಾಕ್ಯವು
(ಎ) ಮಿಶ್ರ ವಾಕ್ಯ
(ಬ) ಸಾಮಾನ್ಯ ವಾಕ್ಯ
(ಸಿ) ಸಂಯೋಜಿತ ವಾಕ್ಯ
(ಡಿ) ಪ್ರಶ್ನಾರ್ಥಕ ವಾಕ್ಯ

ಪ್ರಶ್ನೆ 38.
‘ಮಾಡೇವು’ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
(ಎ) ವಿಧ್ಯರ್ಥಕ
(ಬ) ಸಂಬಂಧಾರ್ಥಕ
(ಸಿ) ನಿಷೇಧಾರ್ಥಕ
(ಡಿ) ಸಂಭಾವನಾರ್ಥಕ

ಪ್ರಶ್ನೆ 39.
‘ಸಾವಿತ್ರಿಯೊಳ್’ ಪದದಲ್ಲಿರುವ ವಿಭಕ್ತಿಯಿದು
(ಎ) ಪ್ರಥಮಾ
(ಬ) ತೃತೀಯಾ
(ಸಿ) ಪಂಚಮಿ
(ಡಿ) ಸಪ್ತಮಿ

ಪ್ರಶ್ನೆ 40.
ಆತ್ಮಾರ್ಥಕ ಸರ್ವನಾಮ ಪದವಿದು
(ಎ) ನಿಮ್ಮ
(ಬ) ತಮ್ಮ
(ಸಿ) ನೀವು
(ಡಿ) ಅವರು

VII. ಈ ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂದಿ ಪದವನ್ನು ಬರೆಯಿರಿ. 4 × 1 = 4

ಪ್ರಶ್ನೆ 41.
ಊರೂರು : ದ್ವಿರುಕ್ತಿ : : ಕೆನೆಮೊಸರು : __________________

ಪ್ರಶ್ನೆ 42.
ಯುದ್ಧ : ಬುದ್ದ : : ಪ್ರಸಾದ : ____________________

ಪ್ರಶ್ನೆ 43.
ಶ್ರಮಣಿ : ತಪಸ್ವಿನಿ : : ಸುರಭಿ : ________________

ಪ್ರಶ್ನೆ 44.
ಆಸ್ಪತ್ರೆ : ಪೋರ್ಚ್‌ಗೀಸ್‌ : : ದವಾಖಾನೆ : ________________

ಪ್ರಶ್ನೆ 45.
ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ. 1 × 3 = 3
ಪುಟ್ಟಿದ ನೂರ್ವರು ಮೆನ್ನೊಡ
ಖಳನೊ ಳೊವಿಂಗೆ ಕುಪ್ಪೆ ವ ರಮೆಂಬ
ಅಥವಾ
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ವೊಲಾಂಬ ರಮುಂಟೆ ನಿನ್ನದೊಂ

ಪ್ರಶ್ನೆ 46.
ಈ ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ. 1 × 3 = 3
“ಮಾರಿಗೌತಣವಾಯ್ತು ನಾಳಿನ ಭಾರತವು”
ಅಥವಾ
“ಆಚೋದ ಸರೋವರವು ತೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.”

ಪ್ರಶ್ನೆ 47.
ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ. 1 × 3 = 3

  • ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
  • ದೇಶ ನೋಡು; ಕೋಶ ಓದು
  • ಆಳಾಗಬಲ್ಲವನು ಅರಸಾಗಬಲ್ಲನು

ಪ್ರಶ್ನೆ 48.
ನಿಮ್ಮನ್ನು ಇಳಕಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ‘ಯಶೋಧಾ’ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಏರ್ಪಡಿಸಿದ ‘ವಿದ್ಯಾರ್ಥಿನಿಯರ ಕರಾಟೆ ಕೌಶಲ ತರಬೇತಿ’ಯ ಸಮಾರೋಪ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ‘ಕನ್ನಡಪ್ರಭ’ ದಿನಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರವೊಂದನ್ನು ಬರೆಯಿರಿ. 1 × 5=5
ಅಥವಾ
ನಿಮ್ಮನ್ನು ಐಶ್ವರ್ಯ ನಗರದಲ್ಲಿ ವಾಸವಾಗಿರುವ ‘ರಾಜೇಶ್ವರಿ’ ಎಂದು ಭಾವಿಸಿಕೊಂಡು, ಶಾಲೆಯಲ್ಲಿ ಆಚರಿಸಿದ ವಾರ್ಷಿಕೋತ್ಸವ ಕಾರ್ಯಕ್ರಮಗಳ
ವಿಶೇಷತೆಯನ್ನು ಕುರಿತು ಬಾದಾಮಿಯ ಪುಲಿಕೇಶಿ ನಗರದಲ್ಲಿರುವ ಅಣ್ಣ ‘ಬಸವೇಶ’ ನಿಗೆ ಪತ್ರವೊಂದನ್ನು ಬರೆಯಿರಿ.

ಪ್ರಶ್ನೆ 49.
ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧ ಬರೆಯಿರಿ.

  • ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ
  • ರಾಷ್ಟ್ರೀಯ ಭಾವೈಕ್ಯತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ
  • ಮಹಿಳಾ ಸಬಲೀಕರಣ.

ಪ್ರಥಮ ಭಾಷೆ ಕನ್ನಡ

ಸಮಯ : 3 ಗಂಟೆ
ಅಂಕಗಳು : 100

ವಿಭಾಗ – ‘ಎ’
(ಪಠ್ಯಗಳ ಅಧ್ಯಯನ – ಗದ್ಯ ಪದ್ಯ, ಪೋಷಕ ಅಧ್ಯಯನ)

I.
ಉತ್ತರ 1:
ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಾರ್ ಸೈರ್‌.

ಉತ್ತರ 2:
ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ಎಂಜಿನಿಯರ್ ದಿನಾಚರಣೆ’ ಯನ್ನು ಆಚರಿಸಲಾಗುತ್ತಿದೆ.

ಉತ್ತರ 3:
ಕವಿ ಸಿದ್ಧಲಿಂಗಯ್ಯ ಅವರು ಮನೆ ಮಂಚಮ್ಮ ಎಂಬ ಗ್ರಾಮದೇವತೆಯ ಕತೆ ಹೇಳಿದ್ದಾರೆ.

ಉತ್ತರ 4:
ಭಗವದ್ಗೀತೆಯು ರಚಿಸಿದವರು ಮಹರ್ಷಿ ವೇದವ್ಯಾಸರು.

ಉತ್ತರ 5:
ಮರದ ಬುಡದಲ್ಲಿ ಸಂಪತ್ತನ್ನು ಕಾಣದೆ ಎಲ್ಲ ಸಂಪತ್ತನ್ನು ನೀನೇ ತೆಗೆದುಕೊಂಡಿದ್ದೀಯೆ ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಮಾಡುತ್ತಾನೆ.

ಉತ್ತರ 6:
ಹಕ್ಕಿಯು ಕಾಲದ ಸಂಕೇತವಾಗಿದೆ.

ಉತ್ತರ 7:
ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಕುಂಪಣಿ ಸರಕಾರ ಆದೇಶ ಹೊರಡಿಸಿತು.

ಉತ್ತರ 8:
ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.

ಉತ್ತರ 9:
ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.

II ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

ಉತ್ತರ 10:
ಲಂಡನ್‌ನಲ್ಲಿ ಸಾಮ್ರಾಟರ ರಾಜ್ಯಭೀಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂರಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ ಮಿನ್‌ಸ್ಟರ್‌ ಮಂದಿರದ ಒಂದು ಭಾಗದಲ್ಲಿದೆ. ಅದನ್ನು ‘ಸ್ಫೋನ್ ಆಫ್ ಸೈನ್’ ಎಂದು ಕರೆಯುತ್ತಾರೆ.

ಉತ್ತರ 11:
ಶಿವಮೊಗ್ಗದ ಡಾ. ಅಶೋಕ ಪೈ (ಮನೋವೈದ್ಯರು) ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.

ಉತ್ತರ 12:
ಯಾರನ್ನೇ ಆಗಲಿ, ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ. ಆದುದರಿಂದ ಹುಲಿಯು ಹಿಂದಿನಿಂದ ಹಾರಿ ಶಾನುಭೋಗರನ್ನು ಕೊಲ್ಲಲಿಲ್ಲ.

ಉತ್ತರ 13:
ದುಷ್ಟಬುದ್ಧಿಯು ಮನೆಗೆ ಬಂದು ಏಕಾಂತದಲ್ಲಿ ತನ್ನ ತಂದೆಯ ಕೈಯನ್ನು ಹಿಡಿದು ರಹಸ್ಯವಾಗಿ ಅಲ್ಲಿಯವರೆಗೂ ನಡೆದ ಘಟನೆಗಳನ್ನು ತಿಳಿಸಿ “ನಿಮ್ಮ ಒಂದು ಮಾತಿನಿಂದ ಮಾತ್ರ ನಾವು ಹಸಿವಿನಿಂದ ಇರದೆ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು (ಗಳಿಸಲು; ಉಳಿಸಲು ಸಾಧ್ಯ. ನೀವು ಆ ಮರದ ಪೊಟರೆಯೊಳಗೆ ಅಡಗಿ ಕುಳಿತುಕೊಳ್ಳಿ ಎಲ್ಲರೂ ಮರವನ್ನು ಸಾಕ್ಷಿ ಕೇಳಿದಾಗ ನೀವು ಒಳಗಿನಿಂದಲೇ (ವೃಕ್ಷ ಸಾಕ್ಷಿ) “ಧರ್ಮಬುದ್ದಿಯೇ ಸಂಪತ್ತನ್ನು ಕೊಂಡೊಯ್ದನು ಎಂದು ಹೇಳಿರಿ” ಎಂದನು.

ಉತ್ತರ 14:
ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ, ವೀರತನ, ಸಾಹಸವನ್ನು ವರ್ಣಿಸುವುದರಿಂದ ಲಾವಣಿ ಎಂದರೆ ವೀರಗೀತೆ ಎಂದು ಕರೆಯುವುದು ವಾಡಿಕೆ. ಏಕ ಘಟನೆಯನ್ನಾಧರಿಸಿದ್ದು ಕಥಾನಾತ್ಮಕವಾಗಿರುವ ಲಾವಣಿಗಳು ಹಾಡಿನ ರೂಪದಲ್ಲಿ ಕಟ್ಟಿದ ಕತೆ. ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಠವಾಗಿರುತ್ತವೆ. ಹಿಂದಿನಿಂದ ವಾಕ್ಷರಂಪರೆಯಲ್ಲಿ ಉಳಿದು ಬಂದಿದ್ದು, ಐತಿಹಾಸಿಕ ಮಹತ್ವ ಪಡೆದಿವೆ. ಗದ್ಯದ ಹೊಳಲನ್ನು, ಭಾವಗೀತದ ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನೂ, ಅರ್ಥಸೌಂದರ್ಯವನ್ನು ಹೊಂದಿವೆ.

ಉತ್ತರ 15:
ದ್ರುಪದನ ಮಾತಿಗೆ ದ್ರೋಣನು ಪ್ರತ್ಯುತ್ತರವಾಗಿ “ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು” ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೇ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದೇ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾ ಮಂಡಲದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸುತ್ತೇನೆ ಎಂದನು.

ಉತ್ತರ 16:
ಏಪ್ರಿಲ್ 13, 1919 ರಂದು ಬ್ರಿಟಿಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಗ ಹಿಂದೂ ಸಿಖ್ ಮತ್ತು ಮುಸಲ್ಮನವರ ಸಮ್ಮಿಶ್ರಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ ಎಂಬ ಒಕ್ಕಣೆಯು ಜಲಿಯನ್ ವಾಲಾಬಾಗ್‌ನಲ್ಲಿದೆ. ಈ ಒಕ್ಕಣೆಯು ಭಗತ್‌ಸಿಂಗ್‌ನು ಅಂತರರ್ಮುಖಿಯಾಗಲು ಕಾರಣವಾಯಿತು.

ಉತ್ತರ 17:
ಮೃಗದ ಬಾಹ್ಯ ಆಕಾರ ಭೀಕರವಾಗಿತ್ತು. ಕೋರೆಹಲ್ಲು, ಹಂದಿಯದೇಹ, ತೋಳದ ಚಲನೆಯನ್ನು ಪಡೆದಿದ್ದ ಮೃಗ ಕರ್ಕಶ ಸದ್ದು, ಗೊಗ್ಗರು ಧ್ವನಿಯನ್ನು ಹೊಂದಿತ್ತು.

ಉತ್ತರ 18:
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಸ್ವಾಮಿ ವಿವೇಕಾನಂದರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ” ಎಂಬುದು ಸ್ವಾಮಿ ವಿವೇಕಾನಂದರ ಅಭಿಪ್ರಾಯವಾಗಿದೆ.

ಉತ್ತರ 19.:
‘ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು ನಂಗಏಲಿ ಅರ್ತು ಈ ಹಾಸಿನ – ಹೇಳಿರೆ ಕೈಗೆ ಹಲ್ಮುರು ಕೊಡುವೆನು

III. ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.

ಉತ್ತರ 20:
ಈ ವಾಕ್ಯವನ್ನು ಡಿ.ಎಸ್. ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಹಲವು ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಆ ಕಾರಣಕ್ಕಾಗಿ ‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂಬ ಬಿರುದಿಗೆ ಪಾತ್ರರಾದರು. ಮಹಾರಾಜರಾಗಿ ರಾಜ ಪದವಿಯನ್ನು ಹೊಂದಿದ್ದರೂ ಸಹ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದರು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ.

ಉತ್ತರ 21:
ಈ ವಾಕ್ಯವನ್ನು ಶಿವಕೋಟ್ಯಾಚಾರರು ರಚಿಸಿರುವ ವಡ್ಡಾರಾಧನೆ ಎಂಬ ಕೃತಿಯ ಒಂದು ಭಾಗವಾಗಿರುವ ‘ಸುಕುಮಾರಸ್ವಾಮಿಯ ಕಥೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.

ಸುಕುಮಾರನು ಹೆಸರಿಗೆ ತಕ್ಕಂತೆ ಸುಕುಮಾರನಾಗಿಯೇ ಸುಖ ಭೋಗಗಳನ್ನು ಅನುಭವಿಸುತ್ತಾ ಇರುವಾಗ ಒಬ್ಬ ಜೋಯಿಸರು ಅರಮನೆಗೆ ಬಂದು ಸುಕುಮಾರನ ಬಗ್ಗೆ ಭವಿಷ್ಯವನ್ನು ನುಡಿದ ಸಂದರ್ಭದ ಮಾತು ಇದಾಗಿದೆ.

ಉತ್ತರ 22:
ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾನೆ.

ಹಕ್ಕಿಯು ಬೆಳ್ಳಿ ಹಳ್ಳಿಯನ್ನು ಎಂದರೆ ಶುಕ್ರಗ್ರಹವನ್ನು ದಾಟಿ, ಮುಂದೆ ಹೋಗಿ ಮಂಗಳ ಲೋಕದ ಅಂಗಳಕ್ಕೆ ಏರಿದೆ ಎಂದು ಸಮಯದ ಬಗ್ಗೆ ದ.ರಾ. ಬೇಂದ್ರೆಯವರನ ಹೇಳಿದ್ದಾರೆ.

ಉತ್ತರ 23:
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ. ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಮಾತನ್ನು ಅವನು ಹೇಳಿದ್ದಾನೆ.
ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡು, “ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು, ಆಕೆಯ ಮಗನು ರಘೋಹನನಾದ ಶ್ರೀರಾಮನು. ಆವನು ಈ ಕುದುರೆ (ಯಜ್ಞಾಶ್ವ)ಯನ್ನು ಬಿಟ್ಟಿರುವನು. ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ” ಎಂದು ಬರೆದಿತ್ತು. ಆ ಪತ್ರದ ಅಭಿಪ್ರಾಯವನ್ನು ಲವನು ಬೇಗನೆ ಗ್ರಹಿಸಿದನು. ಏನು ನಮ್ಮ ತಾಯಿ ಬಂಜೆಯೇ? ಅಲ್ಲ ಅವಳು ವೀರ ಮಾತೆಯಲ್ಲವೆ? ಎಂದು ಹೇಳಿ ಆ
ಕುದುರೆಯನ್ನು ಲವನು ಹಿಡಿದನು. ತಾನು ಹೊದೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಸುತ್ತಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು.

IV.
ಉತ್ತರ 24:
ಕವಿ : ಕುವೆಂಪು
ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ : 29.12.1904-1994
ಸ್ತಿಳ : ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಕುಪ್ಪಳಿ
ಕೃತಿಗಳು : ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ, ನನ್ನ ದೇವರು ಮತ್ತು ಇತರ ಕಥೆಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ತಪೋನಂದನ ರಸೋವೈಸಃ, ಅಮಲನ ಕಥೆ, ಮೋಡಣ್ಣನ ತಮ್ಮ, ಉಪಮ್ಮನಹಳ್ಳಿಯ ಕಿಂದರಜೋಗಿ, ಜಲಗಾರ, ಯಮನ ಸೋಲು, ಬೆರಳೆ ಕೊರಳ್, ನೆನಪಿನ ದೋಣಿಯಲ್ಲಿ.
ಆಕರಗ್ರಂಥ : ಪಕ್ಷಿಕಾಶಿ
ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡಮಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ಗೌರವ ಡಾಕ್ಟರೇಟ್, ರಾಷ್ಟ್ರಕವಿ ಪ್ರಶಸ್ತಿಗಳು.

ಉತ್ತರ 25:
ಲೇಖಕರು : ಸಾ.ರಾ. ಅಬೂಬಕ್ಕರ್
ಕಾಲ : 30 ಜೂನ್, 1936
ಸ್ತಿಳ: ಕಾಸರಗೋಡು
ಕೃತಿಗಳು .: ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲ್ಲಿ
ಕವನ ಸಂಕಲನಗಳು : ಚಪ್ಪಲಿಗಳು, ಖೆಡ್ಡಾ, ಪಯಣ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು.
ಆಕರಗ್ರಂಥ .: ಚಪ್ಪಲಿಗಳು .
ಪ್ರಶಸ್ತಿ .: ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’

V.
ಉತ್ತರ 26:
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸನು ರಾಜೀವಸಖನಾಣೆ
ಅಥವಾ
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ

VI.
ಉತ್ತರ 27:
ನಮ್ಮ ಸುತ್ತ ಮುತ್ತಲೂ ಕವಿದಿರುವ ಆಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ, ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಚ್ಚಣ, ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ, ಹಡಗನ್ನು ಎಚ್ಚರದಿಂದ ಮುನ್ನಡೆಸೋಣ, ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ನಡೆಸೋಣ, ಹೆಜ್ಜೆ ಹೆಜ್ಜೆಗೂ ಅನೇಕ ಸಮಸ್ಯೆಗಳು ನಮಗೆ ಸವಾಲಾಗಿ ನಿಲ್ಲುತ್ತವೆ. ಎದೆಗುಂದದೆ ಮುನ್ನಡೆಸಬೇಕಿದೆ.

VII.
ಉತ್ತರ 28:
ಶ್ರೀರಾಮನು ಸಕಲ ಸದ್ಗುಣಗಳ ಸಾಕಾರ ಮೂರ್ತಿ, ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯು ಒಬ್ಬಳು. ಈಕೆಯು ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಬ್ರಹ್ಮರ್ಷಿಗಳಿನಿಸಿದ್ದ ಮತಂಗ ಮಹರ್ಷಿಗಳ ಆಶ್ರಯದಲ್ಲಿದ್ದಳು. ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ಶಬರಿಯು ರಾಮಧ್ಯಾನದಲ್ಲಿ ತೊಡಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದಳು. ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ. ಶಬರಿಯು ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸುತ್ತಾಳೆ, ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸುತ್ತಾನೆ. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೀಗೆ ನಿಜವಾಗಿದೆ.
ಅಥವಾ
ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು. ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು. ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ. ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ನೊಂದುಕೊಳ್ಳುತ್ತಾಳೆ. ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ. ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ ಇದನ್ನು ಸವಿಯಿರಿ – ಎಂದು ನೀಡಿದಳು. ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು, ನರ್ತಿಸಿದಳು.

ನಾನು ಈಗ ತುಂಬ ಸುಖಿಯಾಗಿಹೆನು. ನನ್ನ ಜೀವನದ ಮಹದಾಸೆ ನೆರವೇರಿದೆ. ನಾನು ಹಂಬಲ ಅಳಿದ ದುಂಬಿಯಾಗಿರುವೆನು, ನದಿ, ಹೊಳೆಯು ಸಮುದ್ರವನ್ನು ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ. ನಿಮ್ಮನ್ನು ನೋಡಿ, ನಿಮ್ಮೊಡನೆ ಮಾತನಾಡಿ ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ, ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ. ಜೀವನ ಸಾರ್ಥಕವಾಗಿದೆ ಪರಲೋಕ ಕರ ನೀಡಿ ಕರೆಯುತ್ತಿದೆ. ನಾನು ಅತ್ಯಂತ ಸುಖಿಯಾಗಿರುವೆ ಎಂದಳು.

ಉತ್ತರ 29.
ಶರಶಯ್ಕೆಯಲ್ಲಿದ್ದ ಭೀಷ್ಕನು ದುರ್ಯೋಧನನಿಗೆ ಈ ರೀತಿ ಬುದ್ಧಿವಾದವನ್ನು ಹೇಳುತ್ತಾನೆ. “ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ ಒಪುವೆಯಾದರೆ ಪಾಂಡವರನ್ನು ಒಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು. ಈಗಲೂ ಅವರು ನಮ್ಮ ಮಾತನ್ನು ಕೇಳುತ್ತಾರೆ. ಅವರು ನಮ್ಮ ಮಾತನ್ನು ಮೀರುವುದಿಲ್ಲ ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ”, ಈ ಮಾತನ್ನು ಕೇಳಿ ದುರ್ಯೋಧನನು ಮುಗುಳುಕ್ಕನು. ಅವರನ್ನು ಕುರಿತು ಹೀಗೆ ಹೇಳಿದನು “ನಾನು ನಿಮಗೆ ನಮಸ್ಕಾರ ಮಾಡಿ ಹೋಗಬೇಕೆಂದು ಬಂದಿದ್ದೇನೆ.

ನಾನು ಶತ್ರುಗಳೊಡನೆ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಯುದ್ದದಲ್ಲಿ ನಾನು ಯಾವ ಕಾರ್ಯ ಮಾಡಬೇಕಾಗಿದೆ ಎಂಬುದನ್ನು ತಿಳಿಸಿ. ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಕೇವಲ ನನ್ನ ಛಲಕ್ಕಾಗಿ ಹೋರಾಡುತ್ತಿರುವೆನು. ನನ್ನ ಮಕ್ಕಳು ಹಾಗೂ ಸೋದರರನ್ನು ಕೊಂದಿರುವ ಪಾಂಡವರನ್ನು ಸೋಲಿಸಲು ಹೋರಾಡುವೆನು ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಸಂಧಿಗೆ ಒಪ್ಪಲಾರೆನು”. ಕರ್ಣ ಹಾಗೂ ದುಶ್ಯಾಸನನನ್ನು ಕೊಂದಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವುದಾಗಿ ಹೇಳುತ್ತಾನೆ.
ಅಥವಾ
ಭೀಷ್ಮನು ಶರಶಯ್ಕೆಯಲ್ಲಿದ್ದರೂ ಪಾಂಡವರು ಹಾಗೂ ಕೌರವರ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ತನ್ನ ಭೇಟಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸೂಚಿಸುತ್ತಾನೆ. ಆದರೆ ದುರ್ಯೋಧನನು ಅವರ ಮಾತಿಗೆ ಸಮ್ಮತವಿಲ್ಲವೆಂದು ತಿಳಿಸುತ್ತಾನೆ. ದುರ್ಯೋಧನನು ತಾನು ಭೂಮಿಗಾಗಿ ಹೋರಾಡುವುದರ ಬದಲು ಛಲಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸುತ್ತಾನೆ. ತನ್ನ ಬಂಟ ಕರ್ಣ, ಸೋದರ ದುಶ್ಯಾಸನನ ಹತ್ಯೆ ಮಾಡಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವ ಛಲವನ್ನು ಹೊಂದಿರುತ್ತಾನೆ. ತನ್ನ ಮಕ್ಕಳು ಹಾಗೂ ಸಹೋದರರನ್ನು ಕೊಂದ ಪಾಂಡವರೊಡನೆ ಒಪ್ಪಂದ ಮಾಡಿಕೊಳ್ಳುವ ಭೀಷ್ಕರ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಕೇವಲ ಪಾಂಡವರೊಡನೆ ಹೋರಾಡುವ ಛಲವನ್ನೇ ಮೆರೆಯುವೆನು ಎಂದು ದುರ್ಯೋಧನನು ಹೇಳುತ್ತಾನೆ.

VI. ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಉತ್ತರ 30:
ಅ. ಚಿಕ್ಕೋ – ಈ ಹೆಸರು ನಿಮಗೆ ವಿಚಿತ್ರವಾಗಿ ಕೇಳಬಹುದು. ಇದೊಂದು ಹಿಂದಿ ಭಾಷೆಯ ಪದ, ಅರ್ಥ; ಅಪ್ಪಿಕೋ, ತಬ್ಬಿಕೋ!
ಈ ಚಳವಳಿ ಪ್ರಾರಂಭವಾದದ್ದು 1973ರ ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಹಳ್ಳಿಯಲ್ಲಿ. ಈ ಚಳವಳಿಗೆ ಕಾರಣರಾದವರು ಮಂಡಲ್ ಹಳ್ಳಿಯ ಅನಕ್ಷರಸ್ಥ ಮಹಿಳೆಯರು.

ಆ. “ಕಸತಂದು ರಸ್ತೆಗೆ ಯಾಕೆ ಹಾಕೀರ? ತೊಟ್ಟೆಗೆ ಯಾಕೆ ಹಾಕಲ್ಲ?”, ಎಂದು ಕೇಳಿದಾಗ ಹೀಗೆ ಗುಡುಗಿದರು; “ಮೊದಿದ್ದಾಗಿ, ತೊಟ್ಟಿ ಈ ರಸ್ತೆಯ ತುದೀಲಿದೆ. ಎರಡನೆಯದಾಗಿ, ನಾವ್ಯಾಕೆ ಅಲ್ಲಿಯವರೆಗೂ ತೆಗೆದುಕೊಂಡು ಹೋಗಿ ಹಾಕ್ಷೇಕು? ನಾವು ಹೊರಗೆ ಸುರೀತೀವಿ. ಸಂಬಳ ತಗೋತಾರಲ್ಲ ಮಹಾನಗರ ಪಾಲಿಕೆ ಆಳುಗಳು, ಅವರು ತಗೊಂಡು ಹೋಗಿ ಹಾಕ್ಲಿ ತೊಟ್ಟಿಲಿ”, “ಆದ್ರೆ ನಿಮ್ಮ ರಸ್ತೆನೇ ಕೊಳೆ ಆಗುತ್ತಲ್ಲ ಮನೆ ಮುಂದೆ ಕಸ ಹಾಕಿದ್ರೆ” ಅಂದಾಗ “ರಸ್ತೆ ನಮ್ಮು ಅಂತ ಯಾರು ಹೇಳಿದ್ರು ನಿಮಗೆ? ಈ ಮನೆ ನಮ್ಮು, ರಸ್ತೆ ಸರ್ಕಾರದ್ದು. ಅದನ್ನು ಸರಿಯಾಗಿ ಇಟ್ಟುಕೊಳ್ಳೋದು ಅವರ ಕೆಲಸ” ಅಂದರು. ಈ ಉದಾಹರಣೆ ನಮ್ಮ ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿರುವ ಅಕ್ಷಮ್ಯವಾದ ಬೇಜವಾಬ್ದಾರಿತವನ್ನು ಎತ್ತಿ ತೋರಿಸುತ್ತದೆ. :

ವಿಭಾಗ – ‘ಬಿ’.
(ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು)

ಉತ್ತರ 31:
(ಬಿ) ಸವರ್ಣದೀರ್ಘ ಸಂಧಿ

ಉತ್ತರ 32:
(ಎ) ಅಲ್ಪವಿರಾಮ

ಉತ್ತರ 33:
(ಡಿ) ಹೆದ್ದೊರೆ

ಉತ್ತರ 34:
(ಸಿ) ಹತ್ತು _

ಉತ್ತರ 35:
(ಎ) ಕ್ರಿಯಾರ್ಥಕ

ಉತ್ತರ 36:
(ಎ) ನೋಟ

ಉತ್ತರ 37:
(ಸಿ) ಸಂಯೋಜಿತ ವಾಕ್ಯ

ಉತ್ತರ 38:
(ಡಿ) ಸಂಭಾವನಾರ್ಥಕ

ಉತ್ತರ 39:
(ಡಿ) ಸಪ್ತಮಿ

ಉತ್ತರ 40:
(ಬಿ) ತಮ್ಮ

ಉತ್ತರ 41:
ಜೋಡಿನುಡಿ

ಉತ್ತರ 42:
ಹಸಾದ

ಉತ್ತರ 43:
ಸುಗಂಧ (ಸುಂದರ)

ಉತ್ತರ 44:
ಅರಬ್ಬಿ

ಉತ್ತರ 45:
Karnataka Board SSLC Kannada Question Paper June 2018 2
ಅಥವಾ
ಖಳನೊಳವಿಂಗೆ ಕುಪ್ಪವರಮೆಂಬವೊಲಾಂಗರಮುಂಟೆ ನಿನ್ನದೊಂ
Karnataka Board SSLC Kannada Question Paper June 2018 3

46.
ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಅಲಂಕಾರ ಹೆಸರು : ರೂಪಕಾಲಂಕಾರ
ಲಕ್ಷಣ : ಅತಿ ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸಿದಾಗ ಅದು ರೂಪಕ ಅಲಂಕಾರವೆನಿಸುತ್ತದೆ.
ಸಮನ್ವಯ : ಉಪಮೇಯ : ನಾಳಿ ಭಾರತ (ಭಾರತ ಯುದ್ದ)
ಉಪಮಾನ : ಮಾರಿಗೌತಣ
ಉಪಮೇಯವಾದ ‘ನಾಳಿನ ಭಾರತವನ್ನು’ ಉಪಮಾನವಾದ ಮಾರಿಗೌತಣಕ್ಕೆ ಅಭೇದವಾಗಿ ಕೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಅಥವಾ
ಉತ್ಪಕ್ಷಾಲಂಕಾರ: ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ತೇಕ್ಷಾಲಂಕಾರ.
ಉದಾ: ಅಯ್ಯೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದಯ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಉಪಮೇಯ: ಅಚೋದ ಸರೋವರ
ಉಪಮಾನ: ರನ್ನಗನ್ನಡಿ
ಅಲಂಕಾರ: ಉತ್ತೇಕ್ಷಾಲಂಕಾರ
ಲಕ್ಷಣ: ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ಪಕ್ಷಾಲಂಕಾರ.

ಸಮನ್ವಯ: ಉಪಮೇಯ : ಅಚೋದ ಸರೋವರ
ಉಪಮಾನ : ರನ್ನಗನ್ನಡಿ.

ಉತ್ತರ 47:
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಗಾದೆಯ ಮಾತು ಚಿಕ್ಕ ಚಿಕ್ಕ ವಾಕ್ಯಗಳಲ್ಲಿದ್ದರೂ ವಿಶಾಲವಾದ ಅರ್ಥವನ್ನು ಕೊಡುತ್ತದೆ. ಗಾದೆಗಳನ್ನು ಬಳಸದ ಭಾಷೆಯಿಲ್ಲ ದೇಶ ಇಲ್ಲ. “ಹಸಿಯ ಗೋಡೆಯ ಮೇಲೆ ಹರಳನಿಟ್ಟಂತೆ” ಇದೆ ಇದರ ಪ್ರಭಾವ, ಗಾದೆ ವಾಕ್ಯಗಳು ಬಹು ಪ್ರಚಲಿತವಾಗಿರಲು ಕಾರಣವೇ ಅದರ ನೇರ ಬಿಚ್ಚು ನುಡಿ. ಇಂತಹ ಗಾದೆಗಳಲ್ಲಿ ಒಂದು ಮೇಲಿನ ಈ ಗಾದೆ ಮಾತು. “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ”

ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕೆಲವು ಗಂಟೆಗಳಲ್ಲಿ ಉರುಳಿಸಬಹುದು. ಕಷ್ಟಪಟ್ಟು ದುಡಿದ ಹಣವನ್ನು ಕ್ಷಣ ಮಾತ್ರದಲ್ಲಿ ಸೋಲು ಮಾಡಬಹುದು. ಸತ್ಯಮಾರ್ಗದಲ್ಲಿ ನಡೆದು ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ದುಷ್ಟರ ಸಹವಾಸದಿಂದ ಹಾಳಾಗಬಹುದು. ಉತ್ತಮ ಕೆಲಸಗಳಿಗೆ ಬೇಕಾಗುವ ಶ್ರಮ ಸಮಯ ದೀರ್ಘವಾಗಿದ್ದು ಅದನ್ನು ಹಾಳುಗೆಡಹಲು ಕೆಲವೇ ಕ್ಷಣ ಸಾಕು, ಕುಂಬಾರ ಹಗಲೂ ರಾತ್ರಿ ಕಷ್ಟಪಟ್ಟು ಮಾಡಿದ ಮಡಿಕೆ ಒಂದು ದೊಣ್ಣೆ ಪೆಟ್ಟಿನಿಂದ ಒಡೆದು ಹೋಗುವುದು. ಆದ್ದರಿಂದಲೇ “ಕಟ್ಟುವುದು ಕಠಿಣ; ಕೆಡವುಹುದು ಸುಲಭ” ಎಂಬ ಮಾತೂ ಮೇಲಿನ ಗಾದೆಯ ಅರ್ಥವನ್ನೇ ಹೇಳುತ್ತದೆ.

ದೇಶ ನೋಡು; ಕೋಶ ಓದು
ಹಿರಿಯರ ಅನುಭವದ ನುಡಿಯೇ ಗಾದೆ. ಕಿರಿದಾದ ಮಾತಿನಲ್ಲಿ ಹಿರಿದಾದ ಅರ್ಥವನ್ನು ಹೇಳುವ ಗಾದೆಗಳಿಲ್ಲದ ದೇಶವಿಲ್ಲ; ಭಾಷೆಯಿಲ್ಲ; ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೇ ಗಾದೆಯ ಮಹತ್ವವನ್ನು ಹೇಳುತ್ತದೆ. ಹಸಿಯ ಗೋಡೆಯ ಮೇಲೆ ಹರಳು ನೆಟ್ಟಂತೆ ಇದರ ಪರಿಣಾಮ, ಗಾದೆಗಳನ್ನು ಬುದ್ದಿ ಹೇಳುವಾಗ ವಿಚಾರಗಳನ್ನು ಸ್ಪಷ್ಟಪಡಿಸುವಾಗ, ಹೋಲಿಸುವಾಗ, ತಪ್ಪುಗಳನ್ನು ತಿದ್ದುವಾಗ ಬಳಸುತ್ತಾರೆ. ಮೇಲಿನ ಗಾದೆ ಜ್ಞಾನ ಸಂಪಾದನೆಗೆ, ಬುದ್ದಿ ಹೆಚ್ಚಿಸಿಕೊಳ್ಳಲು, ಯಾವ ಮಾರ್ಗ ಅನುಸರಿಸಬೇಕು ಎಂದು ತಿಳಿಸುತ್ತದೆ. ಬೇರೆ ಬೇರೆ ಸ್ಥಳಗಳಿಗೆ ಭೇಟಿಕೊಟ್ಟರೆ ನಮ್ಮ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಜ್ಞಾನ ಸಂಪಾದನೆಯಾಗುತ್ತದೆ. ಹೀಗೆ ಸಂಪಾದಿಸುವ ಜ್ಞಾನದಿಂದ ನಮ್ಮ ವ್ಯಕ್ತಿತ್ವ ಎತ್ತರಕ್ಕೆ ಬೆಳೆಯುತ್ತದೆ. ಪರಿಪೂರ್ಣ ವ್ಯಕ್ತಿಗಳಾಗಿ ಬದುಕು ಸಾರ್ಥಕವಾಗುತ್ತದೆ ಎನ್ನುವುದು ಈ ಗಾದೆಯ ವಿಶೇಷ ಅರ್ಥ.

ಆಳಾಗಬಲ್ಲವನು ಅರಸಾಗಬಲ್ಲನು
ಗಾದೆಗಳು ಹಿರಿಯರ ಅನುಭವಾಮೃತಗಳು, ಗಾದೆಗಳು ವೇದಗಳಿಗೆ ಸಮ ಎಂಬ ಮಾತೂ ಇದೆ. ಆಳಾಗಬಲ್ಲವನು ಅರಸನಾಗಬಲ್ಲ ಎಂಬುದು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ. ಈ ಗಾದೆಯು ಕಾಯಕದ ಮಹತ್ವವನ್ನು ವಿವರಿಸುತ್ತದೆ, ತಮಗೆ ವಹಿಸಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಕಸಗುಡಿಸುವ ಕಾರ್ಯವೂ ಕೀಳಲ್ಲ, ತಮ್ಮ ಗೌರವವನ್ನು ಹೊಂದಬೇಕು. ನಾನು ಶ್ರೀಮಂತ, ಓದಿದವನು ಎಂಬ ಅಹಂಕಾರವನ್ನು ಪ್ರದರ್ಶಿಸಿ ತನಗೆ ಒಪ್ಪಿಸಿದ ಕಾರ್ಯ ಕೀಳು ಎಂದು ಭಾವಿಸಿದರೆ ಅವರು ಎಂದೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಾಯಕವೇ ಕೈಲಾಸ, ದುಡಿಮೆಯೇ ದುಡ್ಡಿನತಾಯಿ, ಅರಸನಾಗ ಬಯಸುವವನು ಸೇವಕನ ಕೆಲಸವನ್ನು ಬಲ್ಲವನಾಗಿದ್ದು ಅವನು ಅದನ್ನೂ ಮಾಡುವಲ್ಲಿ ಸಮರ್ಥನಿರಬೇಕು ಎಂಬುದು ಈ ಗಾದೆಯ ಅರ್ಥವಾಗಿದೆ.

ಉತ್ತರ 48:

ದಿನಾಂಕ : 06-06-2018
ಬಿಜಾಪುರ

ಇಂದ,
ಯಶೋಧಾ
ಬಾಲಕಿಯರ ಸರ್ಕಾರಿ ಪ್ರೌಢಶಾಲೆ
ಇಳಕಲ್
ಗೆ,

ಸಂಪಾದಕರು ಕನ್ನಡಪ್ರಭ ದಿನಪತ್ರಿಕೆ,
ಡಾ. ಬಿ.ಆರ್. ಅಂಬೇಡ್ಕರ್ ಬೀದಿ,
ಬೆಗಳೂರು – 560 001.

ಮಾನ್ಯರೆ,

ವಿಷಯ : ‘ಕರಾಟೆ ಕೌಶಲ ತರಬೇತಿ’ ಸಮಾರೋಪ ಸಮಾರಂಭದ ವರದಿ

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 5-6-2018 ರಂದು ನಮ್ಮ ಬಲಕಿಯರ ಸರ್ಕಾರಿ ಪ್ರೌಢಶಾಲೆ, ಇಳಕಲ್ ಇಲ್ಲಿ ಈ ವರ್ಷದ ವಿದ್ಯಾರ್ಥಿನಿಯರ ಕರಾಟೆ ಕೌಶಲ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ವಹಿಸಿದ್ದರು. ಅತಿಥಿಗಳಾಗಿ ಪ್ರಖ್ಯಾತ ಕರಾಟೆ ಪಟುವಾದ ಶ್ರೀ ಸಚ್ಚಿದಾನಂದ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಆತ್ಮರಕ್ಷಣೆಯ ವಿದ್ಯೆಯಾಗಿ ಕರಾಟೆ ಎಂಬ ವಿಷಯದ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ‘ಪ್ರಶಸ್ತಿ ಪತ್ರವನ್ನು ವಿತರಿಸಲಾಗಿತ್ತು. ಕರಾಟೆ ಕಲೆಯ ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ವರದಿ ಮತ್ತು ಛಾಯಾಚಿತ್ರಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ದಯವಿಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು
ಕೋರುತ್ತೇನೆ.
ವಂದನೆಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ,
(ಯಶೋಧಾ)

ಅಥವಾ

ದಿನಾಂಕ : 02-01-2018
ನಂ. 16, 3ನೇ ಕ್ರಾಸ್,
ಐಶ್ವರ್ಯನಗರ, ವಿಜಯಪುರ

ತೀರ್ಥರೂಪ ಸಮಾನರಾದ ಅಣ್ಣ ಬಸವೇಶನಿಗೆ ನಿನ್ನ ತಂಗಿ ಮಾಡುವ ನಮಸ್ಕಾರಗಳು. ಇಲ್ಲಿ ನಾನು ಆರೋಗ್ಯವಾಗಿರುತ್ತೇನೆ. ಅಲ್ಲಿ ನಿಮ್ಮೆಲ್ಲರ ಆರೋಗ್ಯಕ್ಕೆ ಪತ್ರ ಬರೆಯಿರಿ.
ಈಗ ತಿಳಿಸುವುದೇನೆಂದರೆ ನಮ್ಮ ಶಾಲೆಯಲ್ಲಿ 2017 ಡಿಸೆಂಬರ್ ತಿಂಗಳ 28 ರಂದು ಶಾಲಾ ವಾರ್ಷಿಕೋತ್ಸವವನ್ನು ಆಚರಿಸಿದೆವು. ಈ * ಕಾರ್ಯಕ್ರಮಕ್ಕೆ ಪ್ರಖ್ಯಾತ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಮ್ಮ ಶಾಲಾ
ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆ ದಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ನನಗೂ ಆಟ ಹಾಗೂ ನೃತ್ಯದಲ್ಲಿ ಬಹುಮಾನಗಳು ಬಂದವು. ಅಂದು ಜನಪದ ಗೀತೆಗಾಯನ, ನಾಟಕ, ನೃತ್ಯ, ಕೋಲಾಟ ಮೊದಲಾದ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಗಳು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಹರುಷ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಂದು ಸಂಜೆ 3 ಗಂಟೆಗೆ ಕಾರ್ಯಕ್ರಮ ಮುಗಿಯಿತು.
ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸು.

ನಿನ್ನ ಪ್ರೀತಿಯ ತಂಗಿ
(ರಾಜೇಶ್ವರಿ)

ಹೊರ ವಿಳಾಸ :
ಬಸವೇಶ
ನಂ. 13, ಚಿತ್ರಾ ರಸ್ತೆ,
ಪುಲಿಕೇಶಿ ನಗರ,
ಬಾದಾಮಿ, ಬಾಗಲಕೋಟೆ ಜಿಲ್ಲೆ

ಉತ್ತರ 49:
ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ
ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ದೇವರೂ ಸಹ ವಾಸಿಸುತ್ತಾನೆ ಎಂಬ ಪ್ರಸಿದ್ಧವಾದ ಮಾತೊಂದಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರೂ ಹಾಗೇ ಯೋಚಿಸಿದರೆ, ಕಾರ್ಯ ಪ್ರವೃತ್ತವಾದರೆ ಇಡೀ ಭಾರತ ಸ್ವಚ್ಛವಾಗಿರುತ್ತದೆ. ಈ ಕಾರ್ಯ ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು.

ಭಾರತದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು `ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ನಗರ ಹಳ್ಳಿಗಳೆನ್ನದೆ, ಎಲ್ಲಡೆಯೂ ಇದಕ್ಕೆ ಉತ್ತಮ ಪ್ರತಿಕ್ರಿಯೆಯು ಪ್ರಕಟವಾಗಿದೆ. ತ್ಯಾಜ್ಯವಸ್ತುಗಳ ಸಮರ್ಪಕ ವಿಲೇವಾರಿಯಾದರೆ ಸ್ವಚ್ಛ ಪರಿಸರ ಕಾಣಬಹುದಾಗಿದೆ. ಪ್ರತಿನಿತ್ಯ ಸ್ವಲ್ಪ ಸಮಯವನ್ನು ಸ್ವಚ್ಛತೆಗೆ ಮೀಸಲಿಡುವುದರಿಂದ ಸುಂದರವಾದ ಪರಿಸರವನ್ನು ನಾವು ಕಾಣಬಹುದಾಗಿದೆ. ಹಿರಿಯರು, ಕಿರಿಯರೆನ್ನದೆ ಪ್ರತಿಯೊಬ್ಬರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸ್ವಚ್ಛಭಾರತ ಅಭಿಯಾನ ಯಶಸ್ವಿಯಾಗುತ್ತದೆ.

ರಾಷ್ಟ್ರೀಯ ಭಾವೈಕ್ಯತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ.
ದೇಶದಾದ್ಯಂತ ಆಚರಿಸುವ ಹಬ್ಬಗಳನ್ನು ರಾಷ್ಟ್ರೀಯ ಹಬ್ಬಗಳೆಂದು ಕರೆಯುವರು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆ, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ, ಅಕ್ಟೋಬರ್ 2ರ ಗಾಂಧಿ ಜಯಂತಿ ಮತ್ತು ಜನವರಿ 26 ರಂದು ಆಚರಿಸಲ್ಪಡುವ ಗಣರಾಜ್ಯೋತ್ಸವ ಇವುಗಳಲ್ಲಿ ಪ್ರಮುಖವಾಗಿವೆ. ಬ್ರಿಟಿಷ್‌ರ ಆಳ್ವಿಕೆಯಿಂದ ಭಾರತ 1947ರ ಆಗಸ್ಟ್ 15ರಂದು ಮುಕ್ತವಾಯಿತು. ಇದರ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ಅಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದವರ ಸ್ಮರಣೆ ಮಾಡಲಾಗುವುದು. ಸ್ವಾತಂತ್ರ್ಯಾನಂತರ ನಮ್ಮದೇ ಸಂವಿಧಾನವನ್ನು ರಚಿಸಿಕೊಂಡೆವು. 1950ರಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಪ್ರತಿವರ್ಷ ಜನವರಿ 26ನ್ನು ಗಣರಾಜ್ಯೋತ್ಸವವೆಂದು ಆಚರಿಸಲಾಗುತ್ತದೆ. ಅಲ್ಲದೆ ಯುಗಾದಿ, ದೀಪಾವಳಿ, ಹೋಳಿ, ಓಣಂ, ರಂಜಾನ್, ಕ್ರಿಸ್‌ಮಸ್‌ ಮೊದಲಾದ ಸಾಂಸ್ಕೃತಿಕ ಹಬ್ಬಗಳು ಉಂಟು. ಆಯಾ ಜನಾಂಗದ ಜನರು ತಮ್ಮ ತಮ್ಮ ಹಬ್ಬಗಳನ್ನು ಆಚರಿಸುವರು. ಎಲ್ಲರೊಂದಿಗೆ ಸಂತೋಷ ಹಂಚಿಕೊಳ್ಳುವರು.

ಮಹಿಳಾ ಸಬಲೀಕರಣ,
ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ ಎಂಬ ಮಾತೊಂದಿದೆ. ಮಹಿಳೆಯರು ಪುರುಷರಷ್ಟೇ ಸಮರ್ಥರು, ಸಮಾನರು, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಸಾಧನೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಕೆಲವು ಕಾರಣಗಳಿಂದ ಸ್ತ್ರೀಯರು ಅವಕಾಶ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಅವಕಾಶಗಳನ್ನು ನೀಡಿ ಮಹಿಳಾ ಸಬಲೀಕರಣ ಮಾಡಬೇಕಾಗಿದೆ.

ಮಹಿಳೆಯರನ್ನು ಸಬಲರನ್ನಾಗಿಸಲು ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತಂದು ಅವರನ್ನು ಸಬಲರನ್ನಾಗಿಸುವಲ್ಲಿ ಸ್ತ್ರೀಶಕ್ತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸ್ವಸಹಾಯ ಗುಂಪುಗಳನ್ನು ನಿಯೋಜಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಕಾನೂನು ನೆರವುಗಳನ್ನು ನೀಡಲು ಸಾಂತ್ವನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸ್ವಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುತ್ತದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಮಹಿಳೆಯರಿಗೆ ಗೌರವನೀಡಿ ಅವರೂ ಸಹ ಸ್ವಾಭಿಮಾನದಿಂದ, ಸ್ವಾವಲಂಬನೆಯಿಂದ ಬದುಕಲು ನೆರವಾಗಬೇಕು. ಈ ಮೂಲಕ ಮಹಿಳಾ ಸಬಲೀಕರಣವನ್ನು ಮಾಡಬೇಕಾದ ಜವಾಬ್ದಾರಿ ಸರ್ಕಾರದೊಡನೆ ಸಾರ್ವಜನಿಕರದ್ದೂ ಆಗಿದೆ.

Karnataka SSLC Kannada Model Question Papers

Karnataka SSLC Kannada Model Question Paper 4 with Answers (1st Language)

Students can Download Karnataka SSLC Kannada Model Question Paper 4 with Answers (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 4 with Answers (1st Language)

Karnataka SSLC Kannada Model Question Paper 4 with Answers (1st Language) – 1
Karnataka SSLC Kannada Model Question Paper 4 with Answers (1st Language) - 1
Karnataka SSLC Kannada Model Question Paper 4 with Answers (1st Language) - 2

Karnataka SSLC Kannada Model Question Paper 4 with Answers (1st Language) - 3
Karnataka SSLC Kannada Model Question Paper 4 with Answers (1st Language) - 4
Karnataka SSLC Kannada Model Question Paper 4 with Answers (1st Language) - 5

Karnataka SSLC Kannada Model Question Paper 4 with Answers (1st Language) - 6
Karnataka SSLC Kannada Model Question Paper 4 with Answers (1st Language) - 7
Karnataka SSLC Kannada Model Question Paper 4 with Answers (1st Language) - 8

Karnataka SSLC Kannada Model Question Paper 4 with Answers (1st Language) - 9
Karnataka SSLC Kannada Model Question Paper 4 with Answers (1st Language) - 10
Karnataka SSLC Kannada Model Question Paper 4 with Answers (1st Language) - 11

Karnataka SSLC Kannada Model Question Paper 4 with Answers (1st Language) - 12
Karnataka SSLC Kannada Model Question Paper 4 with Answers (1st Language) - 13
Karnataka SSLC Kannada Model Question Paper 4 with Answers (1st Language) - 14

Karnataka SSLC Kannada Model Question Paper 4 with Answers (1st Language) - 15
Karnataka SSLC Kannada Model Question Paper 4 with Answers (1st Language) - 16
Karnataka SSLC Kannada Model Question Paper 4 with Answers (1st Language) - 17

Karnataka SSLC Kannada Model Question Paper 4 with Answers (1st Language) - 18
Karnataka SSLC Kannada Model Question Paper 4 with Answers (1st Language) - 19
Karnataka SSLC Kannada Model Question Paper 4 with Answers (1st Language) - 20

Karnataka SSLC Kannada Model Question Paper 4 with Answers (1st Language) - 21
Karnataka SSLC Kannada Model Question Paper 4 with Answers (1st Language) - 22
Karnataka SSLC Kannada Model Question Paper 4 with Answers (1st Language) - 23

Karnataka SSLC Kannada Model Question Paper 4 with Answers (1st Language) - 24
Karnataka SSLC Kannada Model Question Paper 4 with Answers (1st Language) - 25
Karnataka SSLC Kannada Model Question Paper 4 with Answers (1st Language) - 26
Karnataka SSLC Kannada Model Question Paper 4 with Answers (1st Language) - 27

Karnataka SSLC Kannada Model Question Paper 4 with Answers (1st Language) - 28
Karnataka SSLC Kannada Model Question Paper 4 with Answers (1st Language) - 29
Karnataka SSLC Kannada Model Question Paper 4 with Answers (1st Language) - 30

Karnataka SSLC Kannada Model Question Paper 4 with Answers (1st Language) - 31
Karnataka SSLC Kannada Model Question Paper 4 with Answers (1st Language) - 32

Karnataka SSLC Kannada Model Question Paper 4 with Answers (1st Language) - 33
Karnataka SSLC Kannada Model Question Paper 4 with Answers (1st Language) - 34
Karnataka SSLC Kannada Model Question Paper 4 with Answers (1st Language) - 35

Karnataka SSLC Kannada Model Question Paper 4 with Answers (1st Language) - 36
Karnataka SSLC Kannada Model Question Paper 4 with Answers (1st Language) - 37
Karnataka SSLC Kannada Model Question Paper 4 with Answers (1st Language) - 38

Karnataka SSLC Kannada Model Question Paper 4 with Answers (1st Language) - 39
Karnataka SSLC Kannada Model Question Paper 4 with Answers (1st Language) - 40
Karnataka SSLC Kannada Model Question Paper 4 with Answers (1st Language) - 41

Karnataka SSLC Kannada Model Question Paper 4 with Answers (1st Language) - 42
Karnataka SSLC Kannada Model Question Paper 4 with Answers (1st Language) - 43
Karnataka SSLC Kannada Model Question Paper 4 with Answers (1st Language) - 44

Karnataka SSLC Kannada Model Question Paper 5 with Answers (1st Language)

Students can Download Karnataka SSLC Kannada Model Question Paper 5 with Answers (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 5 with Answers (1st Language)

Karnataka SSLC Kannada Model Question Paper 5 with Answers (1st Language) - 1
Karnataka SSLC Kannada Model Question Paper 5 with Answers (1st Language) - 2
Karnataka SSLC Kannada Model Question Paper 5 with Answers (1st Language) - 3

Karnataka SSLC Kannada Model Question Paper 5 with Answers (1st Language) - 4
Karnataka SSLC Kannada Model Question Paper 5 with Answers (1st Language) - 5
Karnataka SSLC Kannada Model Question Paper 5 with Answers (1st Language) - 6
Karnataka SSLC Kannada Model Question Paper 5 with Answers (1st Language) - 7

Karnataka SSLC Kannada Model Question Paper 5 with Answers (1st Language) - 8
Karnataka SSLC Kannada Model Question Paper 5 with Answers (1st Language) - 9
Karnataka SSLC Kannada Model Question Paper 5 with Answers (1st Language) - 10

Karnataka SSLC Kannada Model Question Paper 5 with Answers (1st Language) - 11
Karnataka SSLC Kannada Model Question Paper 5 with Answers (1st Language) - 12
Karnataka SSLC Kannada Model Question Paper 5 with Answers (1st Language) - 13

Karnataka SSLC Kannada Model Question Paper 5 with Answers (1st Language) - 14
Karnataka SSLC Kannada Model Question Paper 5 with Answers (1st Language) - 15
Karnataka SSLC Kannada Model Question Paper 5 with Answers (1st Language) - 16

Karnataka SSLC Kannada Model Question Paper 5 with Answers (1st Language) - 17
Karnataka SSLC Kannada Model Question Paper 5 with Answers (1st Language) - 18
Karnataka SSLC Kannada Model Question Paper 5 with Answers (1st Language) - 19
Karnataka SSLC Kannada Model Question Paper 5 with Answers (1st Language) - 20

Karnataka SSLC Kannada Model Question Paper 5 with Answers (1st Language) - 21
Karnataka SSLC Kannada Model Question Paper 5 with Answers (1st Language) - 22
Karnataka SSLC Kannada Model Question Paper 5 with Answers (1st Language) - 23
Karnataka SSLC Kannada Model Question Paper 5 with Answers (1st Language) - 24

Karnataka SSLC Kannada Model Question Paper 5 with Answers (1st Language) - 25
Karnataka SSLC Kannada Model Question Paper 5 with Answers (1st Language) - 26
Karnataka SSLC Kannada Model Question Paper 5 with Answers (1st Language) - 27

Karnataka SSLC Kannada Model Question Paper 5 with Answers (1st Language) - 28
Karnataka SSLC Kannada Model Question Paper 5 with Answers (1st Language) - 29
Karnataka SSLC Kannada Model Question Paper 5 with Answers (1st Language) - 30
Karnataka SSLC Kannada Model Question Paper 5 with Answers (1st Language) - 31

Karnataka SSLC Kannada Model Question Paper 5 with Answers (1st Language) - 32
Karnataka SSLC Kannada Model Question Paper 5 with Answers (1st Language) - 33
Karnataka SSLC Kannada Model Question Paper 5 with Answers (1st Language) - 34

Karnataka SSLC Kannada Model Question Paper 5 with Answers (1st Language) - 35
Karnataka SSLC Kannada Model Question Paper 5 with Answers (1st Language) - 36
Karnataka SSLC Kannada Model Question Paper 5 with Answers (1st Language) - 37

Karnataka SSLC Kannada Model Question Paper 5 with Answers (1st Language) - 38
Karnataka SSLC Kannada Model Question Paper 5 with Answers (1st Language) - 39
Karnataka SSLC Kannada Model Question Paper 5 with Answers (1st Language) - 40

Karnataka SSLC Kannada Model Question Paper 5 with Answers (1st Language) - 41
Karnataka SSLC Kannada Model Question Paper 5 with Answers (1st Language) - 42
Karnataka SSLC Kannada Model Question Paper 5 with Answers (1st Language) - 43
Karnataka SSLC Kannada Model Question Paper 5 with Answers (1st Language) - 444

Karnataka SSLC Kannada Model Question Paper 1 with Answers (1st Language)

Students can Download Karnataka SSLC Kannada Model Question Paper 1 with Answers (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 1 with Answers (1st Language)

Karnataka SSLC Kannada Model Question Paper 1 with Answers (1st Language) - 1
Karnataka SSLC Kannada Model Question Paper 1 with Answers (1st Language) - 2
Karnataka SSLC Kannada Model Question Paper 1 with Answers (1st Language) - 3

Karnataka SSLC Kannada Model Question Paper 1 with Answers (1st Language) - 4
Karnataka SSLC Kannada Model Question Paper 1 with Answers (1st Language) - 5
Karnataka SSLC Kannada Model Question Paper 1 with Answers (1st Language) - 6

Karnataka SSLC Kannada Model Question Paper 1 with Answers (1st Language) - 7
Karnataka SSLC Kannada Model Question Paper 1 with Answers (1st Language) - 8
Karnataka SSLC Kannada Model Question Paper 1 with Answers (1st Language) - 9
Karnataka SSLC Kannada Model Question Paper 1 with Answers (1st Language) - 10

Karnataka SSLC Kannada Model Question Paper 1 with Answers (1st Language) - 11
Karnataka SSLC Kannada Model Question Paper 1 with Answers (1st Language) - 12
Karnataka SSLC Kannada Model Question Paper 1 with Answers (1st Language) - 13

Karnataka SSLC Kannada Model Question Paper 1 with Answers (1st Language) - 40
Karnataka SSLC Kannada Model Question Paper 1 with Answers (1st Language) - 14
Karnataka SSLC Kannada Model Question Paper 1 with Answers (1st Language) - 15
Karnataka SSLC Kannada Model Question Paper 1 with Answers (1st Language) - 16

Karnataka SSLC Kannada Model Question Paper 1 with Answers (1st Language) - 17
Karnataka SSLC Kannada Model Question Paper 1 with Answers (1st Language) - 18
Karnataka SSLC Kannada Model Question Paper 1 with Answers (1st Language) - 19
Karnataka SSLC Kannada Model Question Paper 1 with Answers (1st Language) - 20

Karnataka SSLC Kannada Model Question Paper 1 with Answers (1st Language) - 21
Karnataka SSLC Kannada Model Question Paper 1 with Answers (1st Language) - 22
Karnataka SSLC Kannada Model Question Paper 1 with Answers (1st Language) - 23

Karnataka SSLC Kannada Model Question Paper 1 with Answers (1st Language) - 24
Karnataka SSLC Kannada Model Question Paper 1 with Answers (1st Language) - 25
Karnataka SSLC Kannada Model Question Paper 1 with Answers (1st Language) - 26
Karnataka SSLC Kannada Model Question Paper 1 with Answers (1st Language) - 27

Karnataka SSLC Kannada Model Question Paper 1 with Answers (1st Language) - 28
Karnataka SSLC Kannada Model Question Paper 1 with Answers (1st Language) - 29
Karnataka SSLC Kannada Model Question Paper 1 with Answers (1st Language) - 30

Karnataka SSLC Kannada Model Question Paper 1 with Answers (1st Language) - 31
Karnataka SSLC Kannada Model Question Paper 1 with Answers (1st Language) - 32
Karnataka SSLC Kannada Model Question Paper 1 with Answers (1st Language) - 33
Karnataka SSLC Kannada Model Question Paper 1 with Answers (1st Language) - 34

Karnataka SSLC Kannada Model Question Paper 1 with Answers (1st Language) - 35
Karnataka SSLC Kannada Model Question Paper 1 with Answers (1st Language) - 36
Karnataka SSLC Kannada Model Question Paper 1 with Answers (1st Language) - 37

Karnataka SSLC Kannada Model Question Paper 1 with Answers (1st Language) - 38
Karnataka SSLC Kannada Model Question Paper 1 with Answers (1st Language) - 39

Karnataka SSLC Kannada Model Question Paper 2 with Answers (1st Language)

Students can Download Karnataka SSLC Kannada Model Question Paper 2 with Answers (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 2 with Answers (1st Language)

Karnataka SSLC Kannada Model Question Paper 2 with Answers (1st Language) - 1
Karnataka SSLC Kannada Model Question Paper 2 with Answers (1st Language) - 2
Karnataka SSLC Kannada Model Question Paper 2 with Answers (1st Language) - 3

 

Karnataka SSLC Kannada Model Question Paper 2 with Answers (1st Language) - 4
Karnataka SSLC Kannada Model Question Paper 2 with Answers (1st Language) - 5
Karnataka SSLC Kannada Model Question Paper 2 with Answers (1st Language) - 6

Karnataka SSLC Kannada Model Question Paper 2 with Answers (1st Language) - 7
Karnataka SSLC Kannada Model Question Paper 2 with Answers (1st Language) - 8

 

Karnataka SSLC Kannada Model Question Paper 2 with Answers (1st Language) - 9
Karnataka SSLC Kannada Model Question Paper 2 with Answers (1st Language) - 10
Karnataka SSLC Kannada Model Question Paper 2 with Answers (1st Language) - 11

Karnataka SSLC Kannada Model Question Paper 2 with Answers (1st Language) - 12

Karnataka SSLC Kannada Model Question Paper 2 with Answers (1st Language) - 13
Karnataka SSLC Kannada Model Question Paper 2 with Answers (1st Language) - 14

Karnataka SSLC Kannada Model Question Paper 2 with Answers (1st Language) - 15
Karnataka SSLC Kannada Model Question Paper 2 with Answers (1st Language) - 16

Karnataka SSLC Kannada Model Question Paper 2 with Answers (1st Language) - 17
Karnataka SSLC Kannada Model Question Paper 2 with Answers (1st Language) - 18

Karnataka SSLC Kannada Model Question Paper 2 with Answers (1st Language) - 19
Karnataka SSLC Kannada Model Question Paper 2 with Answers (1st Language) - 20

Karnataka SSLC Kannada Model Question Paper 2 with Answers (1st Language) - 21
Karnataka SSLC Kannada Model Question Paper 2 with Answers (1st Language) - 22
Karnataka SSLC Kannada Model Question Paper 2 with Answers (1st Language) - 23

Karnataka SSLC Kannada Model Question Paper 2 with Answers (1st Language) - 24
Karnataka SSLC Kannada Model Question Paper 2 with Answers (1st Language) - 25

Karnataka SSLC Kannada Model Question Paper 2 with Answers (1st Language) - 26
Karnataka SSLC Kannada Model Question Paper 2 with Answers (1st Language) - 27

Karnataka SSLC Kannada Model Question Paper 2 with Answers (1st Language) - 28
Karnataka SSLC Kannada Model Question Paper 2 with Answers (1st Language) - 29
Karnataka SSLC Kannada Model Question Paper 2 with Answers (1st Language) - 30

Karnataka SSLC Kannada Model Question Paper 2 with Answers (1st Language) - 31
Karnataka SSLC Kannada Model Question Paper 2 with Answers (1st Language) - 32

Karnataka SSLC Kannada Model Question Paper 2 with Answers (1st Language) - 33
Karnataka SSLC Kannada Model Question Paper 2 with Answers (1st Language) - 34
Karnataka SSLC Kannada Model Question Paper 2 with Answers (1st Language) - 35

Karnataka SSLC Kannada Model Question Paper 2 with Answers (1st Language) - 36
Karnataka SSLC Kannada Model Question Paper 2 with Answers (1st Language) - 37

Karnataka SSLC Kannada Model Question Paper 2 with Answers (1st Language) - 38
Karnataka SSLC Kannada Model Question Paper 2 with Answers (1st Language) - 39
Karnataka SSLC Kannada Model Question Paper 2 with Answers (1st Language) - 40

Karnataka SSLC Kannada Model Question Paper 2 with Answers (1st Language) - 41
Karnataka SSLC Kannada Model Question Paper 2 with Answers (1st Language) - 42

Karnataka SSLC Kannada Model Question Paper 2 with Answers (1st Language) - 43
Karnataka SSLC Kannada Model Question Paper 2 with Answers (1st Language) - 44

Karnataka SSLC Kannada Model Question Paper 3 with Answers (1st Language)

Students can Download Karnataka SSLC Kannada Model Question Paper 3 with Answers (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Model Question Paper 3 with Answers (1st Language)

Karnataka SSLC Kannada Model Question Paper 3 with Answers (1st Language) - 1
Karnataka SSLC Kannada Model Question Paper 3 with Answers (1st Language) - 2
Karnataka SSLC Kannada Model Question Paper 3 with Answers (1st Language) - 3
Karnataka SSLC Kannada Model Question Paper 3 with Answers (1st Language) - 4
Karnataka SSLC Kannada Model Question Paper 3 with Answers (1st Language) - 5
Karnataka SSLC Kannada Model Question Paper 3 with Answers (1st Language) - 6

Karnataka SSLC Kannada Model Question Paper 3 with Answers (1st Language) - 7
Karnataka SSLC Kannada Model Question Paper 3 with Answers (1st Language) - 8
Karnataka SSLC Kannada Model Question Paper 3 with Answers (1st Language) - 9
Karnataka SSLC Kannada Model Question Paper 3 with Answers (1st Language) - 10

Karnataka SSLC Kannada Model Question Paper 3 with Answers (1st Language) - 11
Karnataka SSLC Kannada Model Question Paper 3 with Answers (1st Language) - 12
Karnataka SSLC Kannada Model Question Paper 3 with Answers (1st Language) - 13
Karnataka SSLC Kannada Model Question Paper 3 with Answers (1st Language) - 14
Karnataka SSLC Kannada Model Question Paper 3 with Answers (1st Language) - 15

Karnataka SSLC Kannada Model Question Paper 3 with Answers (1st Language) - 16
Karnataka SSLC Kannada Model Question Paper 3 with Answers (1st Language) - 17
Karnataka SSLC Kannada Model Question Paper 3 with Answers (1st Language) - 18
Karnataka SSLC Kannada Model Question Paper 3 with Answers (1st Language) - 19
Karnataka SSLC Kannada Model Question Paper 3 with Answers (1st Language) - 20

Karnataka SSLC Kannada Model Question Paper 3 with Answers (1st Language) - 21
Karnataka SSLC Kannada Model Question Paper 3 with Answers (1st Language) - 22
Karnataka SSLC Kannada Model Question Paper 3 with Answers (1st Language) - 23
Karnataka SSLC Kannada Model Question Paper 3 with Answers (1st Language) - 24
Karnataka SSLC Kannada Model Question Paper 3 with Answers (1st Language) - 25
Karnataka SSLC Kannada Model Question Paper 3 with Answers (1st Language) - 26
Karnataka SSLC Kannada Model Question Paper 3 with Answers (1st Language) - 27

Karnataka SSLC Kannada Model Question Paper 3 with Answers (1st Language) - 28
Karnataka SSLC Kannada Model Question Paper 3 with Answers (1st Language) - 29
Karnataka SSLC Kannada Model Question Paper 3 with Answers (1st Language) - 30
Karnataka SSLC Kannada Model Question Paper 3 with Answers (1st Language) - 31
Karnataka SSLC Kannada Model Question Paper 3 with Answers (1st Language) - 32
Karnataka SSLC Kannada Model Question Paper 3 with Answers (1st Language) - 33

Karnataka SSLC Kannada Model Question Paper 3 with Answers (1st Language) - 34
Karnataka SSLC Kannada Model Question Paper 3 with Answers (1st Language) - 35
Karnataka SSLC Kannada Model Question Paper 3 with Answers (1st Language) - 36
Karnataka SSLC Kannada Model Question Paper 3 with Answers (1st Language) - 37
Karnataka SSLC Kannada Model Question Paper 3 with Answers (1st Language) - 38
Karnataka SSLC Kannada Model Question Paper 3 with Answers (1st Language) - 39

Karnataka SSLC Kannada Model Question Paper 3 with Answers (1st Language) - 42
Karnataka SSLC Kannada Model Question Paper 3 with Answers (1st Language) - 43
Karnataka SSLC Kannada Model Question Paper 3 with Answers (1st Language) - 44
Karnataka SSLC Kannada Model Question Paper 3 with Answers (1st Language) - 45

Karnataka SSLC English Model Question Papers 2019-2020 with Answers

Expert Teachers at KSEEBSolutions.com has created KSEEB Karnataka SSLC English Model Question Papers 2019-2020 with Answers Pdf Download of KSEEB Class 10th Std English Previous Year Model Question Papers, Sample Papers are part of Karnataka SSLC Model Question Papers with Answers.

Here we have given Karnataka Secondary Education Examination Board KSEEB SSLC First Language and Second Language English Model Question Papers for Class 10 State Syllabus Karnataka 2019-20 with Answers Pdf. Students can also read Karnataka SSLC KSEEB Solutions for Class 10 English.

Board KSEEB, Karnataka Board
Textbook KTBS, Karnataka
Class SSLC Class 10
Subject English 1st, 2nd, 3rd Language
Chapter Model Papers, Sample Papers, Previous Papers
Year of Examination 2020, 2019, 2018, 2017
Category Karnataka Board Model Papers

SSLC English Model Question Papers 2019-20 Karnataka State Syllabus

These 1st language and 2nd language English Question Papers Class 10 Karnataka State Syllabus 2020 are useful to understand the pattern of questions asked in the board exam. Know about the important concepts to be prepared for Karnataka Board Exams and Score More marks.

These KSEEB English Model Question Papers 2019-2020 are designed according to the latest exam pattern, so it will help students to know the exact difficulty level of the SSLC English Model Question Papers 2019-20.

SSLC English Model Question Papers for Class 10 State Syllabus Karnataka (1st Language)

SSLC English Model Question Papers for Class 10 State Syllabus Karnataka (2nd Language)

SSLC English Model Question Papers for Class 10 State Syllabus Karnataka (3rd Language)

Karnataka SSLC 2nd Language English Model Question Paper Design

10th Standard Second Language English Question Paper Design Comparative analysis of weightages given in 2018-19 and New weightages for 2019-20

Weightage To Cognitive Levels

Karnataka SSLC English Model Question Paper Design 1

  • Marks allotted to remembering have been reduced from 15% to 10% to discourage rote learning.
  • Marks for expression have been increased from 40% to 45% to give more scope for descriptive and creative writing.

Weightage To Content

Karnataka SSLC English Model Question Paper Design 2

  • 6 marks have been added to the comprehension and composition section.
  • Other minor change is reduction of 4 marks in prose.
  • 2 marks have been added to grammar and vocabulary section.
  • Reference Skill section has been omitted.

Weightage To Type Of Questions

Karnataka SSLC English Model Question Paper Design 4

  • Multiple choice questions have been reduced from 8 to 4.
  • Very short answer questions have been reduced from 16 tol2.
  • Two marks questions have been reduced from 12 to 8.
  • The number of questions for 3 marks has been increased to 9 from 4.
  • In 4 marks questions one question has been reduced and one 5 mark question has been added.

Weightage to Difficulty Level

Karnataka SSLC English Model Question Paper Design 3

  • Weightage to difficulty level remains the same at 20%.
  • Instead of lesson wise weightage, theme wise weightage is given.

Learning language is a skill, too much stress on textual content encourages rote learning among the students without understanding the content. Objective type and short answer questions are viewed by the students as easy and descriptive answers as difficult. Though in reality, all these questions require comprehension of the subject matter. To improve the quality of writing, the focus should be on the expressive and descriptive aspects of the language.

In this regard, minor changes have been made in this year’s question paper pattern. Reducing the weightage of 1 and 2 mark questions and increasing the weightage of long answer questions will help in preparing a balanced question paper and also prevents the possibilities of malpractice. Cognitive level based weightage gives a free hand to the teacher to explore and frame different kinds of questions covering important aspects of language learning.

This shift towards enhancing writing skills also marks a shift in teaching learning process. Stress should be on developing language skills instead of procuring marks by rote learning. Improving language proficiency should be the aim as it helps the students to move to the next stage of higher education with confidence.

Karnataka SSLC 1st Language English Model Question Paper Design

10th Standard First Language English Question Paper Design Comparative analysis of weightages given in 2018-19 and New weightages for 2019-20

Karnataka SSLC English Model Question Paper Design 1st Language

Weightage to Objectives:

Karnataka SSLC English Model Question Paper Design 1st Language 1

  • Marks allotted to the objective of remembering have been reduced from 25% to 21% to discourage memorised learning.
  • To give more scope to the expression skill, the marks have been increased from 34% to 39%.
  • The comprehending skill has been given 36% and the allotment for appreciation skill remains the same.

Weightage to Content:

Karnataka SSLC English Model Question Paper Design 1st Language 2

  • The marks allotted to prose, poetry, supplementary reading have been retained where as marks allotted to grammar and vocabulary have been increased by one mark from 18 to 19 to give a balanced outlook of weightage for the content.
  • One mark is lessened from the comprehension of unseen passage.
  • No marks are specified for any unit paving the way for giving equal importance to all the units without neglecting any.

Weightage to types of Questions:

Karnataka SSLC English Model Question Paper Design 1st Language 3

  • The types of questions are as per the table given above.
  • Multiple choice questions, Analogy, Very short answers, Short answers and Long answers 1, 2 and 3 types are included in the question paper.
  • Multiple choice questions, Analogy and Very short answers are allotted one mark each.
  • Questions of short answers are allotted 2 marks and questions with long answers are allotted 3, 4 and 5 marks, these being questions with descriptive answers.
  • The time duration given to the students to answer the question paper is 2 hours and 45 minutes.
  • Extra 15 minutes are given for reading and comprehending the questions.
  • The Multiple choice questions have been reduced from 10 to 6, number of analogy questions remain the same.
  • One mark questions have been reduced to 7.
  • There are 10 questions of 2 marks each in the new pattern.
  • The number of questions for 3 marks has been increased toll from 9 previously. These 11 questions are grouped into questions with 5-6 sentence answers and questions on reference to context.
  • The number of 4 marks questions is 5 which includes one memorization of poem, three questions from prose and poetry and one question on comprehension of unseen passage. The total 4 marks assigned to comprehension of passage is divided into A and B with two marks each.
  • The number of questions for 5 marks is two – essay writing and letter writing.
  • Among the questions, choice is given to 25% of total marks. Therefore the questions with choice are – essay writing, letter writing, memorization of poem, two questions of 4 marks each and one question of 3 marks.

Weightage to difficulty level:

Karnataka SSLC English Model Question Paper Design 1st Language 4
The weightage to difficulty level has been retained as the previous years.

The basic objective of language learning is to develop language skills – hearing, speaking, reading, and writing. But of late it has been observed that examinations have become marks oriented neglecting the very basic purpose of learning a language. Therefore the design of the question paper in First Language English for the year 2019-20 has been changed.

With a view to discourage the method of writing answers by memorised learning the marks allotted to the objective of remembering have been reduced. The number of objective type questions has been reduced with the intention of avoiding the malpractice of mass copying during the examinations as well as to give more importance to the writing skill. The increase in the number of descriptive (long) answer questions gives scope to the students to express themselves, thus developing creative thinking and writing. Therefore the total number of questions has been reduced from fifty to forty five.

It is a known fact that the teaching/ learning process by the teachers and the students as well as the parents has been carried on based solely on the intention of scoring marks(marks oriented). Therefore fixing the unit wise allotment of marks has been discarded to avoid teaching/leaming processes based on certain units only. A student should learn to give equal importance to all the units. Therefore theme based allotment of marks has been introduced, i.e., as Prose, Poetry, Supplementary Reading, Grammar and Vocabulary, and Composition. No specified marks are given to any unit.

Changing the previous pattern of A, B and C divisions in the question paper, the questions are arranged according to the ascending order of the marks allotted to the questions to bring uniformity in the pattern of the question paper. Direct questions from the text book given at the end of the lesson or poem are avoided so as to instigate the student to read the content in detail thus aiding thought provoking process. The difficulty level of the questions has been retained the same as the previous years to benefit all categories (types) of students.

Karnataka SSLC 3rd Language English Model Question Paper Design

The pattern of question paper for the year 2019-2020 for class 10 has been modified in order to cater to the students of Third Language English, to express their ideas in more of descriptive manner. This will help the learners in acquiring vocabulary and its usage in a creative expression. This pattern of question paper allows the students to think creatively beyond the text and gives scope for language learning, which helps them in their future levels. Hence the weightage for long answers questions that demand the answers in descriptive manner has been raised and the weightage for the objective forms of question has been minimized.

The following table gives the comparative view of number of questions in different types.

Karnataka SSLC 3rd Language English Model Question Paper Design 1

The total number of questions is restricted to 38. 1 mark, 3 marks and one five marks questions have been newly introduced. Essay writing is introduced in order to cater to creative writing. The topics for essay would be covered based on the themes which students have already familiar with. Though the reading comprehension that is passage, has four sub questions, it is considered as one question of four marks. The grammar and vocabulary items would be covered from the content. The difficulty level is maintained as, easy 30%, average 50% and difficulty level is 20%.

MCQ, VSA and SA questions take 40% anddescriptivev questions f. e. 3 marks, 4 marks and 5 marks questions take 60% of the question paper. The unit wise weightage has been squashed and weightage is fixed on themes, i.e. prose, poetry, supplementary reader, grammar and vocabulary, and composition. The question paper is designed in such a way that it leads from easy to difficult level. The marks are graded orderly, starting from 1 mark question to 5 marks question. Blueprint will not be provided by the board.

Weightage for the content, Objectives and Difficulty level is mentioned. Teachers are free to prepare their own question paper based on these weightages.

The table below gives the picture of weightage to content domain with respect to marks.

Karnataka SSLC 3rd Language English Model Question Paper Design 2

On the whole, the new pattern gives scope for the better comprehension of the language, content and curb the practice of rote memory and also the malpractice at examination hall.

Teachers are encouraged to take responsibility to prepare their students to take the examination with confidence.

Karnataka SSLC 3rd Language English Model Question Paper Design 3

We hope the Karnataka State Board Syllabus KSEEB SSLC 10th English Model Question Papers 2019-2020 with Key Answers Pdf Download of KSEEB Class 10th Std 1st and 2nd Language English Previous Year Model Question Papers, Sample Papers will help you.

If you have any queries regarding Karnataka State Syllabus KSEEB 10th Standard First Second Language English Model Question Papers 2019-20 with Answers Pdf, drop a comment below and we will get back to you at the earliest.